ಬೆಂಗಳೂರು: ರಾಜ್ಯಾಧ್ಯಂತ ತಾರಕಕ್ಕೇರಿರುವಂತ ಹಿಜಾಬ್ ಸಂಘರ್ಷದ ವಿವಾದ ಕುರಿತಂತೆ, ಹಿಜಾಬ್ ಅನುಮತಿ ಕೋರಿ ಸಲ್ಲಿಸಲಾಗಿರುವಂತ ಅರ್ಜಿಯ ವಿಚಾರಣೆಯನ್ನು, ಇಂದು ಹೈಕೋರ್ಟ್ ಪುನರಾರಂಭಿಸಿದೆ.
ಇಂದು ಆರಂಭಗೊಂಡಿರುವಂತ ಹಿಜಾಬ್ ವಿವಾದದ ಅರ್ಜಿಯ ವಿಚಾರಣೆಯ ವೇಳೆ ಸಂವಿಧಾನದ 25 (1)ನೇ ವಿಧಿಯ ಕುರಿತಂತೆ ಹೈಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠದಲ್ಲಿ ಬಿಸಿಬಿಸಿ ಚರ್ಚೆ ನಡೆಸಿತು.
ಈ ಬಳಿಕ ಅರ್ಜಿದಾರರ ಪರ-ವಿರೋಧ ವಾದ-ಪ್ರತಿವಾದ ಆಲಿಸಿದ ಬಳಿಕ, ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ.