News Karnataka Kannada
Saturday, May 11 2024
ಬೆಂಗಳೂರು ನಗರ

ಹಲಸೂರು ಕೆರೆಯಲ್ಲಿ ಲಕ್ಷಾಂತರ ಮೀನುಗಳ ಸಾವು

Photo Credit :

ಹಲಸೂರು ಕೆರೆಯಲ್ಲಿ ಲಕ್ಷಾಂತರ ಮೀನುಗಳ ಸಾವು

ಬೆಂಗಳೂರು: ನಗರದ ಹಲಸೂರು ಕೆರೆಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದು, ಮೀನುಗಳ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.

Thousands of dead fish float on Ulsoor Lake; reason unclear-1
ನಿನ್ನೆ ರಾತ್ರಿಯಿಂದ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿ ಕೆರೆಯ ದಡದಲ್ಲಿ ಬಂದು ತೇಲುತ್ತಿವೆ. ಕೆಲವರು ಮೀನಿನ ಸಾಂದ್ರತೆ ಹೆಚ್ಚಾಗಿ ಮೀನುಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಹೀಗಾಗಿರಬಹುದು ಎಂದು ಅಭಿಪ್ರಾಯ ಪಟ್ಟರೆ, ಮತ್ತೊಂದು ಮಾಹಿತಿ ಪ್ರಕಾರ ಕೆರೆಯ ಒಂದು ಭಾಗದ ತಡೆಗೋಡೆ ಒಡೆದು ಕಲುಷಿತ ನೀರು ಕೆರೆಗೆ ಸೇರಿದ್ದು, ಮೀನುಗಳ ಸಾವಿಗೆ ಕಾರಣ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ಮೀನುಗಳ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಸತ್ತ ಮೀನುಗಳು ನದಿ ದಡದ ಹತ್ತಿರ ರಾಶಿ ಬಿದ್ದಿದ್ದು, ಇದರಿಂದ ಗಬ್ಬು ವಾಸನೆ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ನರಕ ಯಾತನೆ ಪಡುವಂತಹ ಪರಿಸ್ಥಿತಿ ಬಂದಿದೆ. ಹಲಸೂರು ಕೆರೆಯಲ್ಲಿ ಏಕಾಏಕಿ ಇಷ್ಟು ಪ್ರಮಾಣದಲ್ಲಿ ಮೀನುಗಳು ಸಾವನ್ನಪ್ಪಿರುವುದರ ಕುರಿತು ತನಿಖೆಯಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಈ ಕೆರೆಯ ಸುತ್ತಲೂ ದೊಡ್ಡ ಅಪಾರ್ಟ್‌ಮೆಂಟ್‌ಗಳು, ರಕ್ಷಣಾ ಇಲಾಖೆ ಕಚೇರಿಗಳು, ಮದ್ರಾಸ್ ಎಂಜಿನಿಯರ್ಸ್‌ ಗ್ರೂಪ್ ಮುಂತಾದ ಕಚೇರಿಗಳು ಇವೆ. ಈ ಭಾಗದ ರಸ್ತೆಯಲ್ಲಿ ಓಡಾಡವವರ ಸಂಖ್ಯೆಯೂ ಹೆಚ್ಚಾಗಿದೆ. ಸತ್ತ ಮೀನಿನ ವಾಸನೆಯಿಂದ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು