ಬೆಂಗಳೂರು: ಬಾದಾಮಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಸಂಘರ್ಷದಿಂದ ದೂರ ಉಳಿದಿರುವ ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸಚಿವ ಸ್ಥಾನ ಕೈತಪ್ಪಿ ಅಸಮಾದಾನಗೊಂಡ ಶಾಸಕರನ್ನು ಸಮಾಧಾನಪಡಿಸಬೇಕಾದ ಸಿದ್ದರಾಮಯ್ಯ ಅವರ ನಡವಳಿಕೆ ತಮಗೂ ಪಕ್ಷದ ವಿಚಾರಗಳಿಗೂ ಸಂಬಂಧವೇ ಇಲ್ಲದಂತೆ ಇದೆ. ಇವರ ಈ ನಡೆಯ ಬಗ್ಗೆ ಕೆಲವು ನಾಯಕರುಗಳು ವರಿಷ್ಠರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ರಾಜ್ಯ ರಾಜಕಾರಣದಲ್ಲಿ ಸಚಿವ ಕೈತಪ್ಪಿದ ಹಿನ್ನೆಲೆ ಅತೃಪ್ತರ ಅಸಮಾಧಾನ, ಬೆಂಬಲಿಗರ ಹೋರಾಟ ದಿನೇ ದಿನೇ ತೀವ್ರವಾಗುತ್ತಿದೆ. ಈ ಬಣದಲ್ಲಿರುವವರು ಸಿದ್ದರಾಮಯ್ಯಗೆ ಬೇಕಾದವರಾದರೂ ಅವರನ್ನು ಸಮಾಧಾನ ಪಡಿಸುವ ಕೆಲಸವನ್ನು ಮಾಡಿಲ್ಲ. ಇಷ್ಟೆಲ್ಲ ಬೆಳವಣಿಕೆಯಾಗುತ್ತಿದ್ದರು ಸಿದ್ದರಾಮಯ್ಯ ಯಾಕೆ ದೂರು ಉಳಿಯಲು ಕಾರಣಬವೇನು ಎಂದು ಕೆಲವು ನಾಯಕರು ಪ್ರಶ್ನಿಸುತ್ತಿದ್ದಾರೆ.