News Karnataka Kannada
Tuesday, May 07 2024
ಬೆಂಗಳೂರು ನಗರ

ಸಿದ್ದರಾಮಯ್ಯ ದೂರ ಉಳಿಯಲು ಕಾರಣವೇನು: ನಾಯಕರ ಪ್ರಶ್ನೆ

Photo Credit :

ಸಿದ್ದರಾಮಯ್ಯ ದೂರ ಉಳಿಯಲು ಕಾರಣವೇನು: ನಾಯಕರ ಪ್ರಶ್ನೆ

ಬೆಂಗಳೂರು: ಬಾದಾಮಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಸಂಘರ್ಷದಿಂದ ದೂರ ಉಳಿದಿರುವ ಮಾಜಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಸಚಿವ ಸ್ಥಾನ ಕೈತಪ್ಪಿ ಅಸಮಾದಾನಗೊಂಡ ಶಾಸಕರನ್ನು ಸಮಾಧಾನಪಡಿಸಬೇಕಾದ ಸಿದ್ದರಾಮಯ್ಯ ಅವರ ನಡವಳಿಕೆ ತಮಗೂ ಪಕ್ಷದ ವಿಚಾರಗಳಿಗೂ ಸಂಬಂಧವೇ ಇಲ್ಲದಂತೆ ಇದೆ. ಇವರ ಈ ನಡೆಯ ಬಗ್ಗೆ ಕೆಲವು ನಾಯಕರುಗಳು ವರಿಷ್ಠರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ರಾಜ್ಯ ರಾಜಕಾರಣದಲ್ಲಿ ಸಚಿವ ಕೈತಪ್ಪಿದ ಹಿನ್ನೆಲೆ ಅತೃಪ್ತರ ಅಸಮಾಧಾನ, ಬೆಂಬಲಿಗರ ಹೋರಾಟ ದಿನೇ ದಿನೇ ತೀವ್ರವಾಗುತ್ತಿದೆ. ಈ ಬಣದಲ್ಲಿರುವವರು ಸಿದ್ದರಾಮಯ್ಯಗೆ ಬೇಕಾದವರಾದರೂ ಅವರನ್ನು ಸಮಾಧಾನ ಪಡಿಸುವ ಕೆಲಸವನ್ನು ಮಾಡಿಲ್ಲ. ಇಷ್ಟೆಲ್ಲ ಬೆಳವಣಿಕೆಯಾಗುತ್ತಿದ್ದರು ಸಿದ್ದರಾಮಯ್ಯ ಯಾಕೆ ದೂರು ಉಳಿಯಲು ಕಾರಣಬವೇನು ಎಂದು ಕೆಲವು ನಾಯಕರು ಪ್ರಶ್ನಿಸುತ್ತಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು