ಬೆಂಗಳೂರು : ವರಮಹಾಲಕ್ಷ್ಮಿ ಹಬ್ಬದ ದಿನ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸರು ಇಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಾರಾಯಣಪ್ಪ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಬಂದಿತರನ್ನು ನಾರಾಯಣಪ್ಪ ಅಲಿಯಾಸ್ ನಾರಾಯಣಸ್ವಾಮಿ, ತಿರುಮಲ, ರಾಮು ಹಾಗೂ ಶೇಕ್ ಆಸೀಫ್ ಎಂದು ಗುರುತಿಸಲಾಗಿದೆ.
ವರಮಹಾಲಕ್ಷ್ಮಿ ಹಬ್ಬದ ದಿನ ಶಾಂತರಾಜು-ಪ್ರೇಮಲತಾ ಎಂಬ ದಂಪತಿಯನ್ನು ಆರೋಪಿಗಳು ಭೀಕರವಾಗಿ ಹತ್ಯೆ ಮಾಡಿದ್ದರು. ಆರೋಪಿ ನಾರಾಯಣಪ್ಪ 7 ವರ್ಷಗಳಿಂದ ವೃದ್ಧ ದಂಪತಿ ಮನೆಯಲ್ಲಿ ಬಾಡಿಗೆಗೆ ಇದ್ದ. ಈತ ಹಿಂದೂಪುರ ಮೂಲದವನಾಗಿದ್ದು, ಇತ್ತೀಚಿಗೆ ವಿಪರೀತ ಸಾಲಕ್ಕೆ ಸಿಲುಕಿದ್ದ. ಹೀಗಾಗಿ ಹಣದ ಅವಶ್ಯಕತೆ ಹೆಚ್ಚಾಗಿತ್ತು. ಇದಕ್ಕಾಗಿ ಬಾಡಿಗೆಗೆ ಇದ್ದ ಮಾಲೀಕನ ಮನೆಯನ್ನೇ ದರೋಡೆ ಮಾಡಲು ಸ್ಕೆಚ್ ಹಾಕಿದ್ದ.
ವೃದ್ಧ ದಂಪತಿ ಚಿನ್ನಾಭರಣ ಎಲ್ಲಿಟ್ಟಿದ್ದಾರೆ ಅಂತ ಆರೋಪಿ ನಾರಾಯಣಪ್ಪ ನೋಡಿಕೊಂಡಿದ್ದ. ಅವರ ಮನೆಗೆ ಕನ್ನ ಹಾಕಲು ವೃದ್ಧ ದಂಪತಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಹೀಗಾಗಿ ನಾರಾಯಣಪ್ಪ ತನ್ನ ಪರಿಚಯಸ್ಥರ ಮೂಲಕ ಕೊಲೆಗೆ ಸಂಚು ರೂಪಿಸಿ ಹತ್ಯೆ ಮಾಡಿದ್ದ.
ವೃದ್ದ ದಂಪತಿ ಕೊಲೆ ಮಾಡಿದ್ದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿದ ಪೋಲೀಸರು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.