ಬೆಂಗಳೂರು : ಮಾರ್ಚ್ 31ರಂದು ಬೆಂಗಳೂರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದು, ಬಳಿಕ ರಸ್ತೆ ಮೂಲಕ ತುಮಕೂರಿಗೆ ತೆರಳಲಿದ್ದಾರೆ.
ನಂತರ ಸಿದ್ದಗಂಗಾ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂದ್ಹಾಗೆ, ಈ ಹಿಂದೆ ರಾಹುಲ್ ಗಾಂಧಿ ಏಪ್ರಿಲ್ 1ರಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವುದಾಗಿ ನಿಶ್ಚಯವಾಗಿತ್ತು.
ಏಪ್ರಿಲ್ 1ರಂದು ತುಮಕೂರಿಗೆ ಅಮಿತ್ ಶಾ ಆಗಮಿಸಲಿದ್ದು, ಹಿಂದಿನ ದಿನ ಅಂದರೆ, ಮಾರ್ಚ್ 31ರಂದೇ ಸಿದ್ದಗಂಗಾ ಮಠಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದದೆ. ಹೀಗಾಗಿ ರಾಹುಲ್ ಒಂದು ದಿನ ಮೊದಲೇ ತುಮಕೂರಿಗೆ ಭೇಟಿ ನೀಡಿ, ಅದೇ ದಿನ ವಾಪಸ್ ಆಗಲಿದ್ದಾರೆ.