News Karnataka Kannada
Sunday, May 12 2024
ಬೆಂಗಳೂರು ನಗರ

ಪಿಯು ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ: ಮೈಸೂರಿನ ರವೀಶ್ ರಾಜ್ಯಕ್ಕೆ ಪ್ರಥಮ

Photo Credit :

ಪಿಯು ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ: ಮೈಸೂರಿನ ರವೀಶ್ ರಾಜ್ಯಕ್ಕೆ ಪ್ರಥಮ

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ರವೀಶ್ 597 ಅಂಕಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ಪಿಯು ಬೋರ್ಡ್ ಎಡವಟ್ಟಿನಿಂದಾಗಿ ಮರುಮೌಲ್ಯಮಾಪನದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ರವೀಶ್ ಟಾಪರ್ ಆಗಿದ್ದಾರೆ. ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಯಾಗಿರುವ ರವೀಶ್‍ಗೆ ಮೊದಲು ಫಲಿತಾಂಶ ಬಂದಾಗ 589 ಅಂಕ ಬಂದಿತ್ತು. ಈಗ ಮತ್ತೊಮ್ಮೆ ಮರು ಮೌಲ್ಯಮಾಪನ ಮಾಡಿದಾಗ ಇಂಗ್ಲೀಷಿನಲ್ಲಿ  ಹೆಚ್ಚುವರಿಯಾಗಿ 8 ಅಂಕ ಬಂದಿದೆ. ಈ ಮೊದಲು ಬೆಂಗಳೂರಿನ ಬಸವೇಶ್ವರನಗರದ ವಿವಿಎಸ್ ಸರ್ದಾರ್ ಪಟೇಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ. ರಕ್ಷಿತಾ 596 ಅಂಕ ಪಡೆಯುವ ಮೂಲಕ ರಾಜ್ಯದಲ್ಲೇ  ಮೊದಲ ಸ್ಥಾನವನ್ನು ಪಡೆದಿದ್ದರು.

ಪರೀಕ್ಷೆ ಫಲಿತಾಂಶ ಬಂದಾಗ ಈತ ವಿಜ್ಞಾನ ವಿಭಾಗದಲ್ಲಿ 589 ಅಂಕ ಗಳಿಸಿದ್ದು, ಅದರಲ್ಲಿ ಸಂಸ್ಕೃತ100, ಜೀವಶಾಸ್ತ್ರ 100, ಗಣಿತ-100, ಭೌತಶಾಸ್ತ್ರ-100, ರಾಸಾಯನಶಾಸ್ತ್ರ 99 ಹಾಗೂ ಇಂಗ್ಲಿಷ್‌ನಲ್ಲಿ -89 ಅಂಕ ಬಂದಿತ್ತು. ಆದರೆ ಮರುಮೌಲ್ಯಮಾಪನಕ್ಕೆ ಹಾಕಿದರಿಂದ ಇಂಗ್ಲಿಷ್‌ನಲ್ಲಿ ಈಗ 98 ಅಂಕ ಬಂದಿದ್ದು ಒಟ್ಟು 597 ಅಂಕಗಳಿಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು