ಬೆಂಗಳೂರು : ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನ ಸುಪ್ರೀಂಕೋರ್ಟ್ ನಡೆಸಲಿದೆ. ಅದ್ರಂತೆ, ಇಂದು ಸುಪ್ರೀಂಕೋರ್ಟ್ನಲ್ಲಿ ಮಹತ್ವದ ಮೇಲ್ಮನವಿ ವಿಚಾರಣೆ ನಡೆಯಲಿದೆ. ಅಂದ್ಹಾಗೆ, ಎನ್ಜಿಟಿ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಈ ಮೇಲ್ಮನವಿಯನ್ನ ಸಲ್ಲಿಸಿದೆ.
ಚೆನ್ನೈ ಮೂಲದ ಪತ್ರಿಕೆಗಳ ವರದಿ ಆಧರಿಸಿ ಎನ್ಜಿಟಿ ದೂರು ದಾಖಲಿಸಿಕೊಂಡಿದ್ದು, ಯೋಜನೆ ಸಂಬಂಧ ಟ್ರಿಬ್ಯುನಲ್ ಸ್ವಯಂ ದೂರು ದಾಖಲಿಸಿಕೊಂಡಿತ್ತು. ಈ ಯೋಜನೆ ಜಾರಿಯಿಂದ ಅರಣ್ಯ ನಾಶವಾಗುತ್ತೆ ಎಂದು ಪತ್ರಿಕೆ ವರದಿ ಮಾಡಿತ್ತು. ನಂತ್ರ ಎನ್ಜಿಟಿಯಲ್ಲಿ ಯೋಜನೆ ಪರ ವಾದಿಸಿದ್ದ ಕರ್ನಾಟಕ, ಯೋಜನೆಯಿಂದ ಪರಿಸರಕ್ಕೆ ಹಾನಿಯಿಲ್ಲವೆಂದು ವಾದಿಸಿತ್ತು. ಈ ವಾದ ಪುರಸ್ಕರಿಸಿ ಕರ್ನಾಟಕದ ವಿರುದ್ಧ ಕೇಸ್ ರದ್ದುಪಡಿಸಿ ಆದೇಶ ಎನ್ಜಿಟಿ ನೀಡಿತ್ತು. ಆದ್ರೆ, ಈ ಸ್ವಯಂಪ್ರೇರಿತ ಕೇಸ್ ರದ್ದುಗೊಳಿಸಿದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ.
ಅದ್ರಂತೆ, ಇಂದು ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಮೇಲ್ಮನವಿ ವಿಚಾರಣೆ ನಡೆಯಲಿದ್ದು, ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಸಿ.ಟಿ ರವಿಕುಮಾರ್ ಮತ್ತು ನ್ಯಾ.ಖಾನ್ವಿಲ್ಕರ್ ನೇತೃತ್ವದ ಪೀಠದಲ್ಲಿ ಮೇಲ್ಮನವಿಯ ವಿಚಾರಣೆ ನಡೆಯಲಿದೆ.