ಹುಬ್ಬಳ್ಳಿ: ಶನಿವಾರ ರಾತ್ರಿ ಬಿಹಾರ ಮೂಲದ ಪರ್ವೇಶ ಸಿಂಗ್ (35) ಎಂಬವರನ್ನು ಇಲ್ಲಿನ ಗೋಕುಲ ರಸ್ತೆ ಮಂಜುನಾಥ ನಗರದ ಕೊಠಾರಿ ಬಡಾವಣೆ ಬೀದಿಯಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ನಡೆದಿದೆ.
ಮೂವರು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಪೊಲೀಸ್ ಕಮಿಷನರ್ ಆರ್. ದಿಲೀಪ್, ಡಿಸಿಪಿಗಳಾದ ಡಿ.ಎಲ್. ನಾಗೇಶ್, ಶಿವಕುಮಾರ ಗುಣಾರೆ, ಹಾಗೂ ಎಸಿಪಿ ಎಚ್.ಕೆ. ಪಠಾಣ, ಗೋಕುಲ್ ರಸ್ತೆ ಇನ್ಸ್ಪೆಕ್ಟರ್ ನಿಂಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿದ್ದರು.