News Karnataka Kannada
Monday, May 06 2024
ಬೆಂಗಳೂರು ನಗರ

ಭಾರತ – ಮಯನ್ಮಾರ್‌ ಗಡಿ ನಿರ್ಬಂಧ ತೆರವು: ಕಾಳು ಮೆಣಸು ದರ ಕುಸಿತ ಸಂಭವ!

Indresh
Photo Credit :

ಬೆಂಗಳೂರು:  ಭಾರತ ಮತ್ತು ಮಯನ್ಮಾರ್‌ ಗಡಿಯಲ್ಲಿನ ಮಣಿಪುರ ರಾಜ್ಯಕ್ಕೆ ಸೇರಿದ  ಮೊರೆಹ್ ನ  Integrated Check Post (ICP) ನ ಗೇಟ್  1ಮತ್ತು 2ನ್ನು ತೆರೆದು ವ್ಯಾಪಾರ ಪುನರಾರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ.  ಕೇಂದ್ರ ವಿದೇಶಾಂಗ ಸಚಿವಾಲಯದ ಸೂಚನೆ ಮೇರೆಗೆ ಈ ಗೇಟ್‌ ಗಳನ್ನು  ಈ ವಾರವಷ್ಟೆ ತೆರೆಯಲಾಗಿದೆ. ಈ ಎರಡೂ ಗೇಟ್‌ ಗಳನ್ನು  ಕಳೆದ 2020 ರ ಮಾರ್ಚ್‌ ನಲ್ಲಿ ಕೋವಿಡ್‌ ಸಾಂಕ್ರಮಿಕ ಉಲ್ಪಣಿಸಿದ ನಂತರ ಮುಚ್ಚಲಾಗಿತ್ತು.

ಮಯನ್ಮಾರ್‌ ನ ಅಧಿಕಾರಿಗಳ ನಿಯೋಗ ನವದೆಹಲಿಯ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ  ಗೇಟ್‌ ತೆರೆದು ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸಿಕೊಡಲು  ಕೋರಿದ ಮೇರೆಗೆ ಈ ಗೇಟ್‌ ಗಳನ್ನು ತೆರೆಯಲಾಗಿದೆ.

ಗೇಟ್‌ ಗಳ ತೆರವಿನಿಂದ  ದ್ವಿಪಕ್ಷೀಯ ವ್ಯಾಪಾರ ವೃದ್ದಿಯಾಗುವುದಾದರೂ ಇತರ ವಸ್ತುಗಳ ಜತೆ ಸಂಬಾರ ವಸ್ತುಗಳ ಹೆಸರಿನಲ್ಲಿ ಅಡಿಕೆ, ಕಾಳುಮೆಣಸು ಕೂಡ ಕಡಿಮೆ ಬೆಲೆಗೆ ಆಮದಾಗುತ್ತಿವೆ. ಇದರಿಂದಾಗಿ ದೇಶದಲ್ಲಿ ಅಡಿಕೆ ಮತ್ತು ಕಾಳು ಮೆಣಸಿನ ದರ ಕುಸಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಯನ್ಮಾರ್‌  ನಿಂದ ಆಮದಾಗುವ ಕಡಿಮೆ ದರ್ಜೆಯ  ಅಡಿಕೆ ಮತ್ತು ಕಾಳು ಮೆಣಸಿಗೆ ನಿರ್ಬಂಧ ಹೇರಬೇಕೆಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಭಾರತ ಅಡಿಕೆ ಮತ್ತು ಕಾಳುಮೆಣಸು ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ. ಈ ವಸ್ತುಗಳು ಒಳ ಬರಲಾರಂಭಿಸಿದರೆ ನಮ್ಮ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ ಬೆಳೆಗಾರರ ಹಿತಕ್ಕೆ ಹಾನಿಯಾಗಲಿದೆ. ಆದ್ದರಿಂದ ತಾವು ಈ ಬಗ್ಗೆ ಗಮನ ಹರಿಸಿ ಮಯನ್ಮಾರ್‌ ಗಡಿಯಲ್ಲಿನ ಮಣಿಪುರ ಗೇಟುಗಳ ಮೂಲಕ ಅಡಿಕೆ ಮತ್ತು ಕಾಳುಮೆಣಸು ಒಳನುಸುಳಿ ದೇಶೀಯ ಮಾರುಕಟ್ಟೆ ಪ್ರವೇಶಿಸದಂತೆ ನಿರ್ಬಂಧಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಕೊಡ್ಗಿ ಅವರು ಮನವಿ ಮಾಡಿದ್ದಾರೆ.

ಮಯನ್ಮಾರ್‌ ಮತ್ತು ಬಾರತದ ನಡುವಿನ ದ್ವಿಪಕ್ಷೀಯ ವಹಿವಾಟು  ವರ್ಷದಿಂದ ವರ್ಷಕ್ಕೆ ಹೆಚ್ಚಳ ದಾಖಲಿಸುತ್ತಿದೆ.  ಈಶಾನ್ಯ ರಾಜ್ಯಗಳಾದ  ಅರುಣಾಚಲ ಪ್ರದೇಶ , ಮಣಿಪುರ, ಮಿಜೋರಾಂ  ಮತ್ತು ನಾಗಾಲ್ಯಾಂಡ್‌ ರಾಜ್ಯಗಳಲ್ಲಿ  1643 ಕಿಲೋಮೀಟರ್‌ ಗಡಿಯನ್ನು ಹಂಚಿಕೊಂಡಿರುವ ಮಯನ್ಮಾರ್‌  ನಲ್ಲಿ  ಕೃಷಿ ಉತ್ಪನ್ನಗಳು ಭಾರತಕ್ಕಿಂತ ಕಡಿಮೆ ದರ ಇದೆ.  2019-  20 ರ ಅಂಕಿ  ಅಂಶಗಳ ಪ್ರಕಾರ  ಮಯನ್ಮಾರ್‌ ಗೆ ಒಟ್ಟು 872 ಮಿಲಿಯನ್‌ ಡಾಲರ್‌ ಮೌಲ್ಯದ  ಸರಕುಗಳು ರಫ್ತಾಗಿವೆ ಇದರಲ್ಲಿ  ಔಷಧಗಳು, ಟ್ರಾಕ್ಟರ್‌ , ವಾಹನ ಬಿಡಿ ಭಾಗಗಳು, ಪೆಟ್ರೋಲಿಯಂ ಉತ್ಪನ್ನಗಳು , ಶೀಥಲೀಕರಿಸಿದ ಗೋ ಮಾಂಸ, ಕಬ್ಬಿಣದ ಸರಳುಗಳು ಇವೆ.

ಇದೇ ಅವಧಿಯಲ್ಲಿ ಮಯನ್ಮಾರ್‌ ನಿಂದ ಭಾರತಕ್ಕೆ 742 ಮಿಲಿಯನ್‌ ಡಾಲರ್‌ ಮೌಲ್ಯದ ಸರಕು ಆಮದಾಗಿದ್ದು ಇದರಲ್ಲಿ ಎಣ್ಣೆ ಕಾಳುಗಳು , ಒಣಗಿದ ಹಣ್ಣು,  ಮರ ಇದೆ. ಮಯನ್ಮಾರ್‌  ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು  ಇದು ಸಾರ್ಕ್‌
ದೇಶವಾಗಿರುವುದರಿಂದ ಸಹಜವಾಗೇ  ಆಮದು ತೆರಿಗೆ ವಿನಾಯ್ತಿ ಪಡೆಯುತ್ತದೆ. ಇದರಿಂದ ಭಾರತದ ಕೃಷಿ ಉತ್ಪನ್ನಗಳ ದರ ಕುಸಿದು ರೈತರಿಗೆ ತೊಂದರೆ ಆಗುತ್ತದೆ ಎಂಬುದು  ರೈತ ಸಂಘಟನೆಗಳ ಆತಂಕವಾಗಿದೆ.

ಈ ಹಿಂದೆ ಮಯನ್ಮಾರ್‌ ನಿಂದ ಆಮದಾಗುತಿದ್ದ ಅಡಿಕೆಯಿಂದಾಗಿ ದೇಶದಲ್ಲಿ ಅಡಿಕೆ ದರ ತೀವ್ರ ಕುಸಿತ ದಾಖಲಿಸಿತ್ತು. ಆಗ ಕೇಂಧ್ರ ಸರ್ಕಾರ ಮದ್ಯ ಪ್ರವೇಶಿಸಿ ಅಡಿಕೆಗೆ ಕಿಲೋಗೆ ಶೇಕಡಾ 108 ರಷ್ಟು ಆಮದು ತೆರಿಗೆ ವಿಧಿಸಿತ್ತು. ಮುಂದೆಯೂ ಕೃಷಿ ಉತ್ಪನ್ನಗಳ ದರ ಕುಸಿದರೆ ಸರ್ಕಾರ ಆಮದು ತೆರಿಗೆ ವಿಧಿಸುವ ಅವಕಾಶ ಇದ್ದೇ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು