News Karnataka Kannada
Thursday, May 02 2024
ಬೆಂಗಳೂರು ನಗರ

ಬೆಂಗಳೂರು: ಸಾಲಕೊಟ್ಟು ಪ್ರಾಣ ಕಳೆದುಕೊಂಡ ಸ್ನೇಹಿತ

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಕಾರೊಂದು ಕಂದಕಕ್ಕೆ ಬಿದ್ದ ಪರಿಣಾಮ ದಂಪತಿ ಹಾಗೂ ಮಗು ಸಾವನ್ನಪ್ಪಿದ್ದಾರೆ.
Photo Credit : IANS

ಬೆಂಗಳೂರು : ಸ್ನೇಹಿತರನ್ನು  ರಕ್ತ ಸಂಬಂಧವನ್ನೂ  ಮೀರಿದವರು ಎನ್ನುತ್ತಾರೆ. ಒಳ್ಳೆ ಸ್ನೇಹಿತ ತನ್ನ ಪ್ರಾಣ ಒತ್ತೆ ಇಟ್ಟು ಮತ್ತೊಬ್ಬ ಸ್ನೇಹಿತನ ಪ್ರಾಣ ಕಾಪಾಡ್ತಾನೆ ಅಂತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ.

ರಕ್ತ ಸಂಬಂಧನ ಮೀರಿದ ಬಂಧು ಎನಿಸಿಕೊಂಡವರು ರಕ್ತ ಹರಿಸಿದ್ದಾನೆ. ಪ್ರಾಣ ಕಾಪಾಡಬೇಕಾದವನೇ ಸ್ನೇಹಿತನ ಪ್ರಾಣ ತೆಗೆದಿದ್ದಾನೆ. ದೊಡ್ಡವರು ಒಂದು ಮಾತು ಹೇಳ್ತಾರೆ ಸ್ನೇಹಿತರ  ಮಧ್ಯೆ, ಸ್ನೇಹದಲ್ಲಿ  ಹಣ ಬರಬಾರದು ಅಂತ. ಇಲ್ಲಾಗಿದ್ದೂ ಅದೇ, ಚೆನ್ನಾಗಿಯೇ ಇದ್ದ ಸ್ನೇಹಿತರ ಮಧ್ಯೆ ಹಣದ ವಿಚಾರ ಬಂದಿತ್ತು. ಸಾಲ ಕೇಳಿ ಸ್ನೇಹ ಕಳೆದುಕೊಂಡಿದ್ದೊಂದೇ ಅಲ್ಲ, ಈತ ಪ್ರಾಣವನ್ನೂ ಕಳೆದುಕೊಂಡಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನ ಹಳ್ಳಿ ವ್ಯಾಪ್ತಿಯ ದೇವಣ್ಣನ ಪಾಳ್ಯ ಎಂಬಲ್ಲಿ ಘಟನೆ ನಡೆದಿದೆ. ಅಲ್ಲಿ ಮಂಜುನಾಥ್ ಎಂಬ 28 ವರ್ಷ ವಯಸ್ಸಿನ ಯುವಕ ಹತ್ಯೆಯಾಗಿದ್ದಾನೆ. ಆಘಾತಕಾರಿ ವಿಚಾರ ಅಂದ್ರೆ ಇಲ್ಲಿ ಮಂಜುನಾಥ್ ಹತ್ಯೆಯಾಗಿದ್ದು ಬೇರೆ ಯಾರಿಂದಲೋ ಅಲ್ಲ, ತನ್ನ ಸ್ನೇಹಿತ ಸಂತೋಷ್ ಎಂಬಾತನಿಂದ.

ಮೃತ ಮಂಜುನಾಥ್ ಹಾಗೂ ಆರೋಪಿ ಸಂತೋಷ್ ಇಬ್ಬರೂ ಸ್ನೇಹಿತರಾಗಿದ್ದರು. ಮಂಜುನಾಥ್ ಹಾಲು ವ್ಯಾಪಾರ ಮಾಡ್ತಾ ಇದ್ದರೆ, ಸಂತೋಷ್ ಕೃಷಿಕನಾಗಿದ್ದ. ಸಾಕಷ್ಟು ವರ್ಷಗಳ ಕಾಲ ಚೆನ್ನಾಗಿಯೇ ಇದ್ದರು. ಈಗ ಕೆಲದಿನಗಳ ಹಿಂದೆ ಸಂತೋಷ್‌ಗೆ ಆರ್ಥಿಕವಾಗಿ ಸಮಸ್ಯೆ ಶುರುವಾಗಿತ್ತು. ಅದನ್ನು ಸ್ನೇಹಿತ ಮಂಜುನಾಥ್ ಬಳಿ ಹೇಳಿಕೊಂಡಿದ್ದ. ಆಗ ಮಂಜುನಾಥ್ ಗೆಳೆಯನಿಗೆ ಧೈರ್ಯ ತುಂಬಿದ್ದ. ಅಲ್ಲದೇ ತನ್ನಲ್ಲಿದ್ದ 25 ಸಾವಿರ ರೂಪಾಯಿಗಳನ್ನು ಸಾಲವಾಗಿ ಗೆಳೆಯ ಸಂತೋಷ್‌ಗೆ ಮಂಜನಾಥ್ ಕೊಟ್ಟಿದ್ದ.

ಮಂಜುನಾಥ್ ನಿಂದ 25 ಸಾವಿರ ರೂಪಾಯಿ ಹಣ ಪಡೆದಿದ್ದ ಸಂತೋಷ್, ತನ್ನ ಸಮಸ್ಯೆಯನ್ನೇನೋ ಬಗೆಹರಿಸಿಕೊಂಡಿದ್ದ. ಆದರೆ ಸುಮಾರು ಟೈಮ್ ಆದರೂ ಮಂಜುನಾಥ್‌ಗೆ ಅದನ್ನು ವಾಪಸ್ ಮಾಡಿರಲಿಲ್ಲ. ಹಣ ವಾಪಸ್ ಬೇಕು ಅಂತ ಮಂಜುನಾಥ್‌ನೇ ಸಾಕಷ್ಟು ಸಲ ಕೇಳಿದ್ದ. ಇದೇ ವಿಚಾರಕ್ಕೆ ಸ್ನೇಹಿತರ ನಡುವೆ ಆಗಾಗ ಗಲಾಟೆ, ಜಗಳ ನಡೆಯುತ್ತಿತ್ತು.

ಕಳೆದ 10ನೇ ತಾರೀಖಿನಂದು ರಾತ್ರಿ ದೇವಣ್ಣನಪಾಳ್ಯದ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಮಂಜುನಾಥ್, ಸಂತೋಷ್ ಬಳಿ ಹಣ ವಾಪಸ್ ಕೊಡುವಂತೆ ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ಗಲಾಟೆ ನಡೆದಿದೆ. ಆಗ ಬೈಕ್‌ನಲ್ಲಿದ್ದ ಮಂಜುನಾಥ್ ಮೇಲೆ ಸಂತೋಷ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಘಟನೆಯಲ್ಲಿ ಮಂಜುನಾಥ್ ತಲೆ ಮತ್ತು ಕುತ್ತಿಗೆಗೆ ತೀವ್ರವಾಗಿ ಗಾಯವಾಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಮಾಡಿದ ವೈದ್ಯರು ತಲೆ ಒಳಗೆ ಭಾರೀ ಹಾನಿಯಾಗಿದೆ ಅಂತ ಹೇಳಿದ್ದರು. ಮರುದಿನ ಬೆಳಿಗ್ಗೆ ಮಂಜುನಾಥ್ ಹಾಸಿಗೆಯಿಂದ ಕೆಳಗೆ ಬಿದ್ದು, ತೀವ್ರ ಗಾಯದಿಂದ ನರಳಿ ಪ್ರಜ್ಞೆ ಕಳೆದುಕೊಂಡರು. ಆದಾದ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿದ್ರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಆಸ್ಪತ್ರೆಯಲ್ಲೇ ಮಂಜುನಾಥ್ ಕೊನೆಯುಸಿರೆಳೆದರು.

ಮಂಜುನಾಥ್ ಸಾವಿನಿಂದ ಬಡ ಕುಟುಂಬ ಕಂಗೆಟ್ಟಿದೆ. ಹಾಲು ಮಾರಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಈಗ ಆಧಾರ ಇಲ್ಲದಂತಾಗಿದೆ. ಮಗನನ್ನು ಕಳೆದುಕೊಂಡ ಹೆತ್ತವರು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಇದೀಗ ಮಂಜುನಾಥ್ ತಂದೆ ಆರೋಪಿ ಸಂತೋಷ್ ವಿರುದ್ಧ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು