ಬೆಂಗಳೂರು : 21 ಗುಂಟೆ ಜಮೀನಿಗಾಗಿ ಮಗನೇ ತಂದೆಯ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೊರ ವಲಯದ ಬನ್ನೇರುಘಟ್ಟದಲ್ಲಿ ಕೊಲೆ ನಡೆದಿದೆ. ಕೊರಟಗೆರೆ ಮೂಲದ ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ.
ಚನ್ನಿಗರಾಯಪ್ಪ ಎರಡು ಮದುವೆಯಾಗಿದ್ದು, ಆಸ್ತಿ ಹಂಚಿಕೆ ವೇಳೆ ಮಡದಿಯರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ಹಿನ್ನೆಲೆ ಪತ್ನಿ ಯಶೋಧಾ ಮತ್ತು ಮಗ ನಿಖಿಲ್ ಕೊಲೆಗೆ ಸಂಚು ರೂಪಿಸಿದ್ದರು. ಸಂಚಿನಂತೆ ಚನ್ನಿಗರಾಯಪ್ಪನನ್ನು ಅಪಹರಿಸಿ, ಕೈ ಕಾಲು ಕಟ್ಟಿ 22 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ತದನಂತರ ದೇಹವನ್ನು ಗುರುತು ಸಿಗದ ರೀತಿಯಲ್ಲಿ ಸುಟ್ಟು ಪರಾರಿಯಾಗಿದ್ದರು. ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಿಗರಾಯಪ್ಪ ಪತ್ನಿ ಯಶೋಧ , ಮಗ ನಿಖಿಲ್, ಮಂಜುನಾಥ್, ವಿಶ್ವಾಸ್ ಬಂಧಿತ ಆರೋಪಿಗಳು. ಸದ್ಯ ಪ್ರಕರಣ ದಾಖಲಿಸಿ ಕೊಂಡಿರುವ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.