News Karnataka Kannada
Sunday, April 28 2024
ಬೆಂಗಳೂರು ನಗರ

ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಂದ ಪತಿ

Murder
Photo Credit :

ಬೆಂಗಳೂರು : ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಆಟೋ ಚಾಲಕ ನೊಬ್ಬ ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ನಂದಿನಿ ಲೇಔಟ್‌ ಠಾಣೆ ವ್ಯಾಪ್ತಿಯ ನರಸಿಂಹಸ್ವಾಮಿ ಲೇಔಟ್‌ನಲ್ಲಿ ನಡೆದಿದೆ.

ವಿದ್ಯಾರಣ್ಯಪುರ ನಿವಾಸಿ ವಿಶ್ವನಾಥ್‌ ಅಲಿಯಾಸ್‌ ಕುಳ್ಳ ವಿಶ್ವ(39) ಕೊಲೆಯಾದ. ಕೃತ್ಯ ಎಸಗಿದ ಆತನ ಸ್ನೇಹಿತ ಆಟೋ ಚಾಲಕ ರವಿಕುಮಾರ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ರವಿಕುಮಾರ್‌ ಪತ್ನಿ ಗಾಯತ್ರಿ ಜತೆ ವಿಶ್ವನಾಥ್‌ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋ ಪದ ಮೇಲೆ ಕೃತ್ಯ ನಡೆದಿದೆ ಎಂಬುದು ಗೊತ್ತಾಗಿದೆ. ವಿಶ್ವನಾಥ್‌ ವಿರುದ್ಧ ನಂದಿನಿಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

ನಂದಿನಿ ಲೇಔಟ್‌ನ ನರಸಿಂಹಸ್ವಾಮಿ ಲೇಔಟ್‌ ನಿವಾಸಿ ಆಟೋ ಚಾಲಕ ರವಿಕುಮಾರ್‌ ಹಾಗೂ ಕೊಲೆಯಾದ ವಿಶ್ವನಾಥ್‌ ಸ್ನೇಹಿತರಾಗಿದ್ದಾರೆ. ವಿಶ್ವನಾಥ್‌ ಕೌಟುಂಬಿಕ ವಿಚಾರ ಸಂಬಂಧ ಪತ್ನಿ, ಇಬ್ಬರು ಮಕ್ಕಳನ್ನು ನಾಲ್ಕು ವರ್ಷಗಳಿಂದ ಬಿಟ್ಟು ಪ್ರತ್ಯೇಕವಾಗಿ ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದಾನೆ. ವಕೀಲರೊಬ್ಬರ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನು ರವಿಕುಮಾರ್‌ ಕೂಡ ಗಾಯತ್ರಿಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಈ ಮಧ್ಯೆ ರವಿಕುಮಾರ್‌ ಮನೆಗೆ ಬರುತ್ತಿದ್ದ ವಿಶ್ವನಾಥ್‌, ಆತನ ಪತ್ನಿ ಗಾಯತ್ರಿ ಜತೆ ಸಲುಗೆ ಬೆಳೆಸಿಕೊಂಡಿದ್ದ. ಮತ್ತೂಂದೆಡೆ ಆಕೆ ಕೂಡ ಮದ್ಯ ವ್ಯಸನಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರವಿಕುಮಾರ್‌ ಇಲ್ಲದ ವೇಳೆಯಲ್ಲಿ ಆಕೆ ಜತೆ ಆತ ಹೆಚ್ಚು ಸಲುಗೆಯಿಂದ ಇರುತ್ತಿದ್ದ. ಈ ವಿಚಾರ ತಿಳಿದ ರವಿಕುಮಾರ್‌, ಸ್ನೇಹಿತ ಮತ್ತು ಪತ್ನಿಗೆ ಎಚ್ಚರಿಕೆ ನೀಡಿದ್ದ. ಆದರೂ ಇಬ್ಬರು ಬದಲಾಗಿರಲಿಲ್ಲಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರವಿಕುಮಾರ್‌ ಮನೆಗೆ ಬಂದ ವಿಶ್ವ ನಾಥ್‌, ಮದ್ಯದ ಅಮಲಿನಲ್ಲಿದ್ದ ಗಾಯತ್ರಿ ಜತೆ ಮಾತನಾಡುತ್ತಿದ್ದ. ಆಟೋ ಬಾಡಿಗೆಗೆ ಹೊರಗಡೆ ಹೋಗಿದ್ದ ರವಿಕುಮಾರ್‌ ಕೂಡ ಅದೇ ವೇಳೆ ಬಂದಿದ್ದು, ಇಬ್ಬರಿಗೂ ಇದೇ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು.ನಂತರ ಹೊರಗಡೆ ಬಂದು ವಾಗ್ವಾದ ನಡೆಸುತ್ತಿದ್ದರು. ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿದ್ದು, ಚಾಕು ಹಾಗೂ ಬ್ಲೇಡ್‌ನಿಂದ ವಿಶ್ವನಾಥ್‌ನ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಸಂಜೆ ವೇಳೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು