ಬೆಂಗಳೂರು: ಜೆಪಿ ನಗರದಲ್ಲಿ ಆರ್ ಬಿಐ ಲೇಜೌಟ್ ನಲ್ಲಿ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಆಸ್ತಿ ವಿಚಾರ ಸಂಬಂಧ ಸಂಬಂಧಿಗಳೇ ಕೊಲೆ ನಡೆಸಿದ್ದಾರೆ ಎಂದು ಶಂಕಿಸಿದ್ದಾರೆ.
೬೫ ವರ್ಷದ ಗೋವಿಂದಪ್ ಹಾಗೂ ಅವರ ಪತ್ನಿ ೫೫ ವರ್ಷದ ಶಾಂತಮ್ಮ ಅವರನ್ನು ಭಾನುವಾರ ಸಂಜೆ ಅವರ ಮನೆಯಲ್ಲಿ ಕೊಲೆ ಮಾಡಲಾಗಿದೆ. ಇವರ ಮಗ ನಾಪತ್ತೆಯಾಗಿದ್ದಾರೆ.
ಸಂಬಂಧಿಗಳ ಜತೆ ಈ ದಂಪತಿಗೆ ಆಸ್ತಿ ಸಂಬಂಧ ತಕರಾರು ಇತ್ತು. ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ. ವಿಶೇಷ ತಂಡವನ್ನು ನಿಯೋಜನೆ ಮಾಡಲಾಘಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
♣