News Karnataka Kannada
Monday, April 29 2024
ಬೆಂಗಳೂರು ನಗರ

ಬೆಂಗಳೂರು: ಪ್ರೇಕ್ಷಕರ ಗಮನಸೆಳೆದ ನಾಟಕ ಮತ್ತು ರಂಗ ಗೀತೆಗಳ ಪ್ರದರ್ಶನ

Drama
Photo Credit : News Kannada

ಬೆಂಗಳೂರು : ಸ್ವರಧಾರಾ ಕರ್ನಾಟಕ ರಾಜ್ಯ ಹಿನ್ನಲೆ ಗಾಯಕರ ಮಹಾಸಂಸ್ಥೆ ವತಿಯಿಂದ ವಿಶ್ವ ರಂಗಭೂಮಿ ದಿನದ ಪ್ರಯುಕ್ತ, ನಾಟಕ ಪ್ರದರ್ಶನ ಮತ್ತು ರಂಗ ಗಾಯನ ನಡೆಯಿತು. ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಜನಾದ್ರಿ ಸಭಾಂಗಣದಲ್ಲಿ ನಡೆದ ನಾಟಕ ಮತ್ತು ರಂಗ ಗೀತೆಗಳ ಪ್ರದರ್ಶನ ಪ್ರೇಕ್ಷಕರ ಗಮನಸೆಳೆಯಿತು.

ಹಿರಿಯ ರಂಗ ಕರ್ಮಿ ಶಿವರಾಂ ಹೆಗ್ಡೆ ನಿರ್ದೇಶನದ “ಕಂಡೋರ ದುಡ್ಡು” ನಾಟಕದ ಮೊದಲ ವೇದಿಕೆ ಪ್ರದರ್ಶನ, ” ನನ್ನತ್ತೆ ನನ್ನಳಿಯ” ನಾಟಕ ಅತ್ಯಂತ ಯಶಸ್ವಿ ಪ್ರದರ್ಶನ ಕಂಡವು. ರಂಗ ಗೀತೆಗಳನ್ನು ಸ್ವರಧಾರ ಗಾಯನ ತಂಡದ ಗಾಯಕ ಗಾಯಕಿಯರು ಹಾಡಿ ನಲಿದರು. ಉತ್ತರಕರ್ನಾಟಕದ ಗೀಗೀ ಪದಗಳು, ಜಾನಪದಗೀತೆಗಳು ಹಾಗೂ ಭಾವಗೀತೆ ಗಳ ಪ್ರದರ್ಶನ ಪ್ರೇಕ್ಷಕರನ್ನು ಮನಸೂರೆ ಗೊಳಿಸಿದವು. ಹಿರಿಯ ರಂಗಭೂಮಿ ಕಲಾವಿದರಾದ ಶಿವರಾಂ ಹೆಗ್ಡೆ ಅವರಿಗೆ ಧನಸಹಾಯದ ಮೂಲಕ ಸನ್ಮಾನಿಸಲಾಯಿತು.

ನಟರಾದ ಗಂಡಸಿ ಸದಾನಂದ ಸ್ವಾಮಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದೆ ರತ್ನಮಾಲಾ, ಸಂಸ್ಥೆಯ ಅಧ್ಯಕ್ಷೆ ಪ್ರೇಮಲತಾ ಎಂ ಹದ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು