ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ರಾಜ್ಯಪಾಲ ವಜುಭಾಯ್ ವಾಲಾ ಅವಕಾಶ ನೀಡಿದ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್–ಜೆಡಿಎಸ್ ಸಲ್ಲಿಸಿರುವ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ ನಾಳೆ ಸಂಜೆ 4 ಗಂಟೆಗೆ ವಿಶ್ವಾಸ ಮತಯಾಚಿಸಲು ಯಡಿಯೂರಪ್ಪಗೆ ಅದೇಶ ನೀಡಿದೆ. ಇದೀಗ ಯಡಿಯೂರಪ್ಪ ಅವರ ಮುಖ್ಭಯಮಂತ್ರಿ ಪಟ್ಟದ ಭವಿಚ್ಯ ನಾಳೆ ಸಂಜೆ 4ಕ್ಕೆ ನಿರ್ಧಾರವಾಗಲಿದೆ.
ಮೊದಲು ಅರ್ಜಿದಾರರಿಗೆ ಎರಡು ಆಯ್ಕೆ ನೀಡಿದ ಸುಪ್ರೀಂ ಕೋರ್ಟ್ ರಾಜ್ಯಪಾಲರ ನಿರ್ಣಯದ ಬಗ್ಗೆ ವಿಸ್ಕೃತ ವಿಚಾರಣೆ ಬೇಕೆ ಅಥವಾ ನಾಳೆಯೇ ವಿಶ್ವಾಸಮತ ಆದೇಶ ನೀಡಬೇಕೆ ಎಂದು ಕೋರ್ಟ್ ಅರ್ಜಿದಾರರಿಗೆ ಆಯ್ಕೆ ನೀಡಿತ್ತು. ನಂತರದ ವಾದದ ಬಳಿಕ ಸುಪ್ರೀಂ ಮೂವರು ನ್ಯಾಯಮೂರ್ತಿಗಳು ನಾಳೆ ಬಿಜೆಪಿ ವಿಶ್ವಾಸಮತ ಯಾಚನೆಗೆ ಪೀಠ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ
ಎ.ಕೆ. ಸಿಕ್ರಿ, ಎಸ್.ಎ. ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರಿದ್ದ ತ್ರಿಸದಸ್ಯ ಪೀಠ ಆದೇಶವನ್ನು ಹೊರಡಿಸಿತು.
ಮೊದಲು ಬಿಜೆಪಿ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ ಅವರು ನಾಳೆಯೇ ವಿಶ್ವಾಸಮತ ಯಾಚಿಸಲು ವಿರೋಧ ವ್ಯಕ್ತಪಡಿಸಿದರು.
ವಿಶ್ವಾಸ ಮತ ಯಾಚನೆ ಗಳಿಸಲು ನಾಳೆ ಸೂಕ್ತ ವ್ಯವಸ್ಥೆಯೊಂದಿಗೆ ಎಲ್ಲ ಶಾಸಕರು ಸದನದಲ್ಲಿ ಹಾಜರಿದ್ದು ಸೂಕ್ತ ಭದ್ರತೆಯನ್ನು ಒದಗಿಸಿ ವಿಶ್ವಾಸ ಮತ ಗಳಿಸಲು ಡಿಜಿಪಿಗೆ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಹೇಳಿಕೆ ನೀಡಿತು.