News Karnataka Kannada
Saturday, May 04 2024
ಬೆಂಗಳೂರು ನಗರ

ಚಾಮರಾಜನಗರ , ಮೈಸೂರು ಜಿಲ್ಲಾದಿಕಾರಿಗಳ ವರ್ಗಾವಣೆಗೆ ಕ್ಷಣಗಣನೆ ?

Photo Credit :

ಚಾಮರಾಜನಗರ , ಮೈಸೂರು ಜಿಲ್ಲಾದಿಕಾರಿಗಳ ವರ್ಗಾವಣೆಗೆ ಕ್ಷಣಗಣನೆ  ?

ಚಾಮರಾಜನಗರ    ಮೇ ೫ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದ  ಆಕ್ಸಿಜನ್​​ ದುರಂತಕ್ಕೆ ಸಂಬಂಧಿಸಿದಂತೆ  ಮೈಸೂರು ಹಾಗೂ ಚಾಮರಾಜನಗರದ  ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವ   ಕುರಿತು ತೀರ್ಮಾನ ತೆಗೆದುಕೊಳ್ಳಲು ಮುಖ್ಯ ಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು  ಮಹತ್ವದ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಧಾನಸೌಧದ ತಮ್ಮ  ಕಚೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ   ಸುದೀರ್ಘ  ಮಾತುಕತೆಯಲ್ಲಿ ತೊಡಗಿರುವ    ಬಿ.ಎಸ್.ಯಡಿಯೂರಪ್ಪ, ಅವರು  ಇಬ್ಬರೂ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸಾಕಷ್ಟು ಒತ್ತಡ  ಬರುತಿದ್ದು  ಈ ಹಿನ್ನೆಲೆಯಲ್ಲಿ     ಇಬ್ಬರಿಗೂ ಯಾವುದೇ ಹುದ್ದೆ  ನೀಡದೆ   ವರ್ಗಾವಣೆ ಮಾಡಿ ಆದೇಶ ಹೊರಡಿಸುವ  ಸಾಧ್ಯತೆ ಇದೆ ಎನ್ನಲಾಗಿದೆ.    ಈ ಇಬ್ಬರೂ ಅಧಿಕಾರಿಗಳನ್ನು  ವರ್ಗಾವಣೆ ಮಾಡಿದಲ್ಲಿ ಸರ್ಕಾರದ ಮೇಲೆ ಜನತೆಯ ಆಕ್ರೋಶ ಕಡಿಮೆ ಆಗಬಹುದು ಎಂದು ಚಿಂತಿಸಲಾಗುತ್ತಿದೆ.  . ಎರಡು ಜಿಲ್ಲೆಗಳಲ್ಲಿ  ಅಧಿಕಾರಿಗಳ ವಿರುದ್ದ  ಜನತೆ ಅಸಮಾಧಾನಗೊಂಡಿದ್ದು  , ವಿಪಕ್ಷ ಶಾಸಕರಾದ ಸಾರಾ ಮಹೇಶ್‌ , ಹರ್ಷವರ್ಧನ್‌ , ವಿಧಾನ ಪರಿಷತ್‌ ಸದಸ್ಯರಾದ ಮರಿ ತಿಬ್ಬೇಗೌಡ ಬಹಿರಂಗವಾಗಿಯೇ ಮೈಸೂರು ಜಿಲ್ಲಾದಿಕಾರಿ  ರೋಹಿಣಿ ಸಿಂಧೂರಿ ಅವರನ್ನು  ಕಟುವಾಗಿ ಟೀಕಿಸಿದ್ದರು.  

ಮೈಸೂರು  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ರಾಜ್ಯ ಸರ್ಕಾರೀ ಮಟ್ಟದಲ್ಲಿ ಪ್ರಭಾವಿಯೇ ಆಗಿದ್ದು  ಚಾಮರಾಜನಗರ ಜಿಲ್ಲಾದಿಕಾರಿ ಡಾ ಎಂ ಆರ್‌ ರವಿ  ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಇಬ್ಬರೂ ವರ್ಗಾವಣೆಯಾದಲ್ಲಿ  ಜನತೆಯ ಆಕ್ರೋಶ ಕಡಿಮೆ ಆಗಲಿದ್ದು  ಪರಿಸ್ಥಿತಿಯೂ ತಿಳಿ ಆಗಲಿದೆ  ಎನ್ನಲಾಗಿದೆ. ಅಲ್ಲದೆ ಈ ಇಬ್ಬರ ತಲೆ ದಂಡ ಆದರೆ  ಸರ್ಕಾರದ  ಮೇಲಿರುವ ಆರೋಪದ ಪ್ರಭಾವವೂ , ಒತ್ತಡವೂ ಕಡಿಮೆ ಆಗಲಿದೆ ಎನ್ನಲಾಗಿದೆ.  ಎಲ್ಲಕ್ಕಿಂತ ಹೆಚ್ಚಾಗಿ ಮಂಗಳವಾರ ಚಾಮರಾಜನಗರ ಜಿಲ್ಲಾದಿಕಾರಿ  ಡಾ ರವಿ    ದುರಂತಕ್ಕೆ ಮೈಸೂರು ಜಿಲ್ಲಾದಿಕಾರಿಗಲೇ ನೇರ ಕಾರಣ ಎಂದು  ಆರೋಪ ಹೊರಿಸಿ ಬಹಿರಂಗವಾಗಿಯೇ  ಟೀಕಿಸಿದ್ದರು. ಇದಕ್ಕೆ ಬುಧವಾರ ಉತ್ತರ ನೀಡಿದ ರೋಹಿಣಿ ಸಿಂಧೂರಿ  ತಮ್ಮ ಮೇಲಿರುವ ಆರೋಪವನ್ನು ನಿರಾಕರಿಸಿದ್ದರು. ಈ ಇಬ್ಬರೂ ಅಧಿಕಾರಿಗಳ ಆರೋಪ , ತಿಕ್ಕಾಟದಿಂದ ಮುಂದೆ ಆಡಳಿತದಲ್ಲೂ  ಸಮಸ್ಯೆ ಆಗಲಿದೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಇಬ್ಬರನ್ನೂ ವರ್ಗಾವಣೆ ಮಾಡುವುದು ಬಹುತೇಕ ಖಚಿತವಾಗಿದ್ದು   ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ   ಜನಾನುರಾಗಿ ಅಧಿಕಾರಿಗಳನ್ನೇ ನೇಮಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಮುಂದಿನ ಕೆಲ ಘಂಟೆಗಳಲ್ಲೇ  ವರ್ಗಾವಣೆ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

 .                                                                                                                                                                                     

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು