ಬೆಂಗಳೂರು: ಉಕ್ರೇನ್ ನ ಯುದ್ಧ ಭೂಮಿಯಲ್ಲಿ ರಷ್ಯಾ ಶೆಲ್ ದಾಳಿಯಿಂದಾಗಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದರು.ಇಂದು ಮೃತ ನವೀನ್ ತಂದೆ ಶೇಖರ್ ಗೌಡಗೆ ಕರೆ ಮಾಡಿದಂತ ಮಾಜಿ ಸಿಎಂ ಯಡಿಯೂರಪ್ಪ, ಸಾಂತ್ವಾನ ಹೇಳಿದರು. ನವೀನ್ ಕಳೆದುಕೊಂಡಿರುವಂತ ಕುಟುಂಬಕ್ಕೆ ಧೈರ್ಯ ತುಂಬಿದರು.
ಅವರ ಪಾರ್ಥೀವ ಶರೀರವನ್ನು ಕರ್ನಾಟಕಕ್ಕೆ ಉಕ್ರೇನ್ ನಿಂದ ತರಿಸೋದಕ್ಕೆ ನೆರವಾಗುವುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಇನ್ನೂ ಮೃತ ನವೀನ್ ಪಾರ್ಥೀವ ಶರೀರವನ್ನು ಉಕ್ರೇನ್ ನಿಂದ ಭಾರತಕ್ಕೆ ತರಿಸೋದಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ನವೀನ್ ಕುಟುಂಬಕ್ಕೆ ಭರವಸೆ ನೀಡಿದರು. ಅಲ್ಲದೇ ನಿಮ್ಮೊಂದಿಗೆ ನಾವಿರುವುದಾಗಿ ಅಭಯ ನೀಡಿದರು.