ಬೆಂಗಳೂರು: ಶಾಸಕಾಂಗ ಪಕ್ಷದ(ಸಿಎಲ್ ಪಿ) ವಿಶೇಷ ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಸಮಜಾಯಿಸಿ ನೀಡುವಂತೆ ನಾಲ್ವರು ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ವಿಧಾನಸಭೆ ಅಧಿವೇಶನದ ದಿನ(ಫೆ.6) ಅಥವಾ ಅಧಿವೇಶನದ ಅವಧಿಯಲ್ಲಿ ಖುದ್ದು ಭೇಟಿಯಾಗಿ ಸಮಜಾಯಿಷಿ ನೀಡುವಂತೆ ಅವರು ಪತ್ರದಲ್ಲಿ ಬರೆದಿರುವರು.
ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಬಿ.ನಾಗೇಂದ್ರ ಮತ್ತು ಉಮೇಶ್ ಜಾಧವ್ ಅವರಿಗೆ ಪತ್ರ ಬರೆದು ತಿಳಿಸಲಾಗಿದೆ.
ಜ.18ರಂದು ನಡೆದ ಸಭೆಗೆ ಅತೃಪ್ತ ಶಾಸಕರು ಗೈರು ಹಾಜರಾಗಿದ್ದರು. ಇದಕ್ಕೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದರೂ ಇದುವರೆಗೆ ಯಾರೂ ಪ್ರತಿಕ್ರಿಯಿಸಿಲ್ಲ.