News Karnataka Kannada
Thursday, May 02 2024
ದೆಹಲಿ

ಆಪರೇಷನ್ ಗಂಗಾ:ಇಂದು ಉಕ್ರೇನ್ ನಿಂದ 182 ಭಾರತೀಯರು ಸ್ವದೇಶಕ್ಕೆ

Flight
Photo Credit : News Kannada

ನವದೆಹಲಿ: ಆಪರೇಷನ್ ಗಂಗಾ ಭಾಗವಾಗಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನಗಳ ಪೈಕಿ 7 ನೇ ವಿಮಾನ ಸುರಕ್ಷಿತವಾಗಿ ಭಾರತ ತಲುಪಿದ್ದು, 182 ಭಾರತೀಯರು ತಾಯ್ನಾಡಿಗೆ ಇಂದು (ಮಾ.1) ರಂದು ಮರಳಿ ಬಂದಿದ್ದಾರೆ.

“ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಶೇಷ ವಿಮಾನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದ್ದು, ಎಂಎಸ್‌ಎಂಇ ಇಲಾಖೆಯ ಕೇಂದ್ರ ಸಚಿವ ನಾರಾಯಣ್ ರಾಣೆ ಭಾರತೀಯರನ್ನು ಸ್ವಾಗತಿಸಿದರು ಈ ಪೈಕಿ ಬಹುತೇಕ ಮಂದಿ ವಿದ್ಯಾರ್ಥಿಗಳಿದ್ದರು” ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಉಕ್ರೇನ್ ನಿಂದ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಭಾರತ ಸರ್ಕಾರ ಬದ್ಧವಾಗಿದೆ. “ನಿಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳನ್ನೂ ಸುರಕ್ಷಿತವಾಗಿ ಕರೆತರುತ್ತೇವೆ ಎಂದು ಸಚಿವರು ಭಾರತಕ್ಕೆ ಮರಳಿದವರಿಗೆ ಭರವಸೆ ನೀಡಿದ್ದಾರೆ.

“ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವರು, ಯುದ್ಧಗ್ರಸ್ತ ದೇಶದಿಂದ ಬಂದ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ ಅವರು ತಮ್ಮ ಮನೆಗಳಿಗೆ ತೆರಳಲು ಎಲ್ಲಾ ರೀತಿಯ ನೆರವನ್ನೂ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು