ಬೆಂಗಳೂರು: ವಿಶ್ವಾಸ ಮತ ಯಾಚಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದು ಭಾರತ ರಾಜಕಾರಣದಲ್ಲಿ ಐತಿಹಾಸಿಕ ಘಟನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ವಿಧಾನಸೌಧ ಕಲಾಪದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿ ವಿಶ್ವಾಸ ಮತ ಯಾಚಿಸದೆ ಪಲಾಯನ ಮಾಡಿರುವುದು ಸಂವಿಧಾನದ ವಿಜಯ ಎಂದರು.
ಇನ್ನೂ ರಾಜ್ಯ ನಾಯಕರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಒತ್ತಡ ಹಾಕಿದ್ದಾರೆ ಎಂದರು. ಇನ್ನೂ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳ ವಿರುದ್ದದ ನಡುವೆಯೂ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು ಎಂದರು.