ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಖ್ಯಾತಿಯ ಮೈಸೂರು ಸಾಂಪ್ರದಾಯಿಕ ಚಿತ್ರಕಲಾವಿದೆ ಬೆಂಗಳೂರಿನ ಡಾ.ಮೀರಾ ಕುಮಾರ್ರವರಿಗೆ ವಿಜಯಪುರದ ಕಂದಗಲ ಶ್ರೀಹನುಮಂತರಾಯ ರಂಗಮಂದಿರದಲ್ಲಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೀರಾಕುಮಾರ್ ಅವರು, ಸಂಭ್ರಮದ ವಾತಾವರಣದಲ್ಲಿ ಕಲಾವಿದರಿಗೆ ಜೀವಮಾನ ಸಾಧನೆಗಾಗಿ ನೀಡುತ್ತಿರುವ ಈ ಗೌರವ ನಿಜಕ್ಕೂ ಸಂತಸ ತಂದಿದೆ .ವಿವಿಧ ಕಲಾಪ್ರಕಾರಗಳಲ್ಲಿ ಅಹಿನಿರ್ಶೀ ಕಲಾಕೃತಿರಚಸಿ ಕಲಾಕೈಂಕರ್ಯ ಮಾಡುತ್ತಿರುವ ಕಲಾವಿದರು ಇಂದು ಸಂಕಷ್ಟದಲ್ಲಿದ್ದಾರೆ. ಕರೋನ ಅಟ್ಟಹಾಸದಿಂದ ಕಂಗಾಲಾಗಿರುವ ಈ ದಿನಗಳಲ್ಲಿ ಕಲಾವಿದರ ಬಾಳಲ್ಲಿ ನವಚೈತನ್ಯ ಮೂಡಿಸುವಂತಹ ಅನೇಕ ಜನಪರ ಯೋಜನೆಯನ್ನು ಅಕಾಡೆಮಿ ರೂಪಿಸಿದೆ.
ನಾಡಿನ ಹಿರಿಯ ಸಾಧಕ ಶ್ರೇಷ್ಟರನ್ನು ಗುರುತಿಸಿವುದರ ಜೊತೆಗೆ ಯುವ ಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀಯ. ಭಾರತೀಯ ಸಂಸ್ಕೃತಿಯ ಮುಕುಟಪ್ರಾಯವೆನಿಸಿದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲೆಗೆ ಹಿಂದೆ ರಾಜಾಶ್ರಯವಿತ್ತು ಈ ಅದರ ಸ್ಥಾನವನ್ನು ಅಕಾಡೆಮಿ ವಹಿಸಿದ್ದು ಪಾರಂಪರಿಕ ಪ್ರಕಾರಕ್ಕೆ ಸೂಕ್ತ ಮನ್ನಣೆ ನೀಡಿ ಗೌರವಿಸುತ್ತಿರುವುದು ಅವರ ಕಾಳಜಿಯ ದ್ಯೋತಕ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಇದಲ್ಲದೆ ಹಿರಿಯ ಕಲಾವಿದರಾದ ಮಂಗಳೂರಿನ ಗಣೇಶ್ ಸೋಮಯಾಜಿ ಮತ್ತು ಧಾರವಾಡದ ಬಿ.ಮಾರುತಿ ರವರಿಗೂ ಲಲಿತಕಲಾ ಗೌರವಕ್ಕೆ ಪಾತ್ರರಾಗಿರುತ್ತಾರೆ. 49ನೇ ವಾರ್ಷಿಕ ಕಲಾ ಬಹುಮಾನಕ್ಕೆ 10 ಕಲಾಕೃತಿಗಳನ್ನು ಆಯ್ಕೆಯಾಗಿತ್ತು .
ವೇದಿಕೆಯಲ್ಲಿ ಕರ್ನಾಟಕ ಚಿತ್ರಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ, ಜಮಖಂಡಿಯ ಹಿರಿಯ ಕಲಾವಿದ ವಿಜಯ ಸಿಂಧೂರ, ಮುಂಬೈನ ವಾಸುದೇವೋ ಕಾಮತ್ , ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ಉಪಸ್ಥಿತರಿದ್ದರು.