ಬೆಂಗಳೂರು: ಬಿಡದಿಯಲ್ಲಿರುವ ಟೊಯೊಟೊ ಕಿರ್ಲೋಸ್ಕರ್ ಮತ್ತು ನೌಕರರ ನಡುವಿನ ಸಮಸ್ಯೆಯನ್ನು ರಾಜ್ಯ ಸರ್ಕಾರವು ಬಗೆಹರಿಸಿದೆ.
ನವಂಬರ್ 10ರಿಂದ ಬಿಡದಿಯಲ್ಲಿರುವ ಕಂಪೆನಿಯ ಪ್ಲ್ಯಾಂಟ್ ನಲ್ಲಿ ಸುಮಾರು 2800 ಮಂದಿ ನೌಕರರು ತಮ್ಮ ಬೇಡಿಕೆ ಈಡೇರಿಸಲು ಪ್ರತಿಭಟಿಸುತ್ತಿದ್ದರು.
ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರನ್ನು ಒಳಗೊಂಡ ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಕಾರ್ಮಿಕ ನಾಯಕರು ಮತ್ತು ಕಂಪೆನಿಯ ಅಧಿಕಾರಿಗಳು ಒಳಗೊಂಡಿದ್ದರು.
ಯಾವುದೇ ವಿವಾದವು ರಾಜ್ಯದ ಘನತೆಗೆ ಧಕ್ಕೆ ಉಂಟು ಮಾಡುವುದು. ರಾಜ್ಯದಲ್ಲಿ ನಿಧಾನವಾಗಿ ಹೂಡಿಕೆಯು ಹರಿದು ಬರುತ್ತಲಿದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ತಿಳಿಸಿದರು.