ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಟೊಮೆಟೋ, ಈರುಳ್ಳಿ, ಬೀನ್ಸ್ ಸೇರಿದಂತೆ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ.
ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದ್ದು, ನುಗ್ಗೇಕಾಯಿ ಕೆಜಿಗೆ ಬರೋಬ್ಬರಿ 30 ರೂ. ನಿಂದ 200 ರೂ. ಗಡಿ ದಾಟಿದೆ. ಹಾಪ್ ಕಾಮ್ಸ್ ನಲ್ಲಿ 350 ರೂ. ಗೆ ಮಾರಾಟವಾಗಿದೆ. ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿರುವುದರಿಂದ ತರಕಾರಿ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಅಗತ್ಯದಷ್ಟು ತರಕಾರಿ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ನುಗ್ಗೇಕಾಯಿ ಕೆಜಿಗೆ 200 ರೂ. ನಿಂದ 360 ರೂ. ವರೆಗೆ ಇದ್ದರೆ, ಬದನೆಕಾಯಿ 30 ರಿಂದ 110 ರೂ.ವಗೆ ತಲುಪಿದೆ. ಟೊಮೆಟೋ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕೆಜಿ ಟೊಮೆಟೋ ಬೆಲೆ 60 ರೂ.ನಿಂದ 100 ರೂ.ಗೆ ಏರಿಕೆಯಾಗಿದೆ. ಈರುಳ್ಳಿ 40 ರಿಂದ 50 ರೂ. ಬೀನ್ಸ್ 60 ರಿಂದ 100 ರೂ. ಕ್ಯಾರೆಟ್ 70 ರಿಂದ 90 ರೂ. ಹೀರೆಕಾಯಿ 50 ರಿಂದ 85 ರೂ. ಬೀಟ್ರೂಟ್ 40 ರಿಂದ 80 ರೂ. ಇದೆ.
ಇನ್ನು ಸೊಪ್ಪಿನ ಬೆಲೆಯಲ್ಲೂ ಏರಿಕೆಯಾಗಿದ್ದು, ಕೊತ್ತಂಬರಿ ಸೊತ್ತು 30 ರೂ.ನಿಂದ 40 ರೂ. ಇದೆ. ಮೆಂತ್ಯ ಪಾಲಕ್, ದಂಟಿನ ಸೊಪ್ಪಿ, ಅರವೆ ಸೊಪ್ಪು ಪ್ರತಿ ಕಟ್ಟಿಗೆ 60 ರೂ. ರಿಂದ 70 ರೂ.ಗೆ ಏರಿಕೆಯಾಗಿದೆ.