News Karnataka Kannada
Thursday, May 02 2024
ಬೆಂಗಳೂರು ನಗರ

ಗಂಡನ ಕೊಲೆ ಮಾಡಿ ಶವದ ಪಕ್ಕ ಮಲಗಿ ಹೈಡ್ರಾಮ ಮಾಡಿದ ಪತ್ನಿ

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಕಾರೊಂದು ಕಂದಕಕ್ಕೆ ಬಿದ್ದ ಪರಿಣಾಮ ದಂಪತಿ ಹಾಗೂ ಮಗು ಸಾವನ್ನಪ್ಪಿದ್ದಾರೆ.
Photo Credit :

ಬೆಂಗಳೂರು : ಯಶವಂತಪುರದಲ್ಲಿ ಖಾಸಗಿ ಕಂಪನಿಯ ಎಕೌಂಟೆಂಟ್​ ಶಂಕರ್​ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಒಳ ಉಡುಪಿನಲ್ಲಿ ಪತ್ನಿ ಬಚ್ಚಿಟ್ಟುಕೊಂಡಿದ್ದ ಮಾಂಗಲ್ಯ ಸರದ ಮೇಲೆ ಮೂಡಿದ ಅನುಮಾನದ ಜಾಡು ಹಿಡಿದ ಹೋದ ಪೊಲೀಸರು ಕೊಲೆ ರಹಸ್ಯವನ್ನ ಬಯಲು ಮಾಡಿದ್ದಾರೆ.

ಆಂಧ್ರಪ್ರದೇಶ ಚಿತ್ತೂರು ಮೂಲದ ಶಂಕರ್​ ರೆಡ್ಡಿ (35) ಕೊಲೆಯಾದವ. ಈತ ಯಶವಂತಪುರ ಎಂಕೆ ನಗರದಲ್ಲಿ ವಾಸವಿದ್ದ. ದಿಲ್ಲಿ ರಾಣಿ ಎಂಬಾಕೆ ಜತೆ ಮದುವೆಯೂ ಆಗಿತ್ತು. ಕ್ಷುಲ್ಲಕ ಕಾರಣಕ್ಕೆ ಇತ್ತೀಚಿಗೆ ಗಂಡನನ್ನು ತೊರೆದು ಚಿತ್ತೂರಿನಲ್ಲಿರುವ ತವರುಮನೆಗೆ ದಿಲ್ಲಿ ರಾಣಿ ತೆರಳಿದ್ದಳು. ಈ ವೇಳೆ ನೆರೆಮನೆಯ ನಿವಾಸಿ ಜತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳು. ಇದ್ಯಾವುದರ ಪರಿವೇ ಇಲ್ಲದ ಗಂಡ, ಪತ್ನಿಗೆ ಕರೆ ಮಾಡಿ ಮನೆಗೆ ವಾಪಾಸ್ಸಾಗುವಂತೆ ಮನವಿ ಮಾಡಿದ್ದ. ಆಕೆಯ ಪಾಲಕರಿಗೂ ತನ್ನ ಬಳಿಗೆ ಕಳುಹಿಸುವಂತೆ ಮನವಿ ಮಾಡಿದ್ದ.

ದಿಲ್ಲಿ ರಾಣಿ ಈ ವಿಚಾರವನ್ನು ಪ್ರಿಯಕರನ ಬಳಿ ಹೇಳಿಕೊಂಡಿದ್ದಳು. ಇದರಿಂದ ಕುಪಿತಗೊಂಡ ಆಕೆಯ ಪ್ರಿಯಕರ, ಶಂಕರ್​ನನ್ನು ಕೊಲೆ ಮಾಡಿ ಕಥೆ ಕಟ್ಟುವಂತೆ ಹೇಳಿದ್ದ. ಅದರಂತೆ 3 ದಿನಗಳ ಹಿಂದೆ ಯಶವಂತಪುರದಲ್ಲಿದ್ದ ಪತಿ ಶಂಕರ್​ ಮನೆಗೆ ದಿಲ್ಲಿ ರಾಣಿ ಬಂದಿದ್ದಳು. ಏ.28ರಂದು ರಾತ್ರಿ 12.30ರಲ್ಲಿ ಪತಿ ಗಾಢ ನಿದ್ದೆಯಲ್ಲಿದ್ದಾಗ ಚೂರಿಯಿಂದ ಇರಿದು ಕೊಲೆ ಮಾಡಿದ್ದಳು. ನಂತರ ಅದೇ ಚೂರಿಯಿಂದ ತನ್ನ ಕೈಗೆ ಸ್ವಲ್ಪ ಗಾಯ ಮಾಡಿಕೊಂಡು ಪತಿಯ ಶವದ ಪಕ್ಕದಲ್ಲಿ ಮಲಗಿ ಪ್ರಜ್ಞೆತಪ್ಪಿರುವಂತೆ ನಟಿಸಿದ್ದಳು. ಈ ನಡುವೆ ಎಚ್ಚರಗೊಂಡ 7 ವರ್ಷದ ಶಂಕರ್​ ಪುತ್ರ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದ. ಮನೆ ಮಾಲೀಕರು ಸ್ಥಳಕ್ಕೆ ಧಾವಿಸಿದಾಗ ಶಂಕರ್​ ಕೊಲೆಯಾಗಿರುವುದು ಗೊತ್ತಾಗಿತ್ತು.

ಗಾಯಗೊಂಡಂತೆ ನಟಿಸಿದ್ದ ದಿಲ್ಲಿ ರಾಣಿಯನ್ನು ಪೊಲೀಸರು ಈ ಕುರಿತು ಪ್ರಶ್ನಿಸಿದಾಗ, ‘ಯಾರೋ ಅಪರಿಚಿತರು ಬಂದು ನನಗೆ ಹಲ್ಲೆ ಮಾಡಿ ಪತಿಯನ್ನು ಕೊಲೆ ಮಾಡಿದ್ದರು. ನನ್ನ ಮಾಂಗಲ್ಯ ಸರವನ್ನು ಕದ್ದೊಯ್ದಿದ್ದಾರೆ’ ಎಂದು ಕಥೆ ಕಟ್ಟಿದ್ದಳು. ಇತ್ತ ಪೊಲೀಸರು ದಿಲ್ಲಿ ರಾಣಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಒಳ ಉಡುಪಿನಲ್ಲಿ ಮಾಂಗಲ್ಯ ಸರ ಬಚ್ಚಿಟ್ಟಿರುವುದು ಕಂಡು ಬಂದಿತ್ತು. ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು