ಬೆಂಗಳೂರು: ಅಪ್ಪನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ಪೊಲೀಸರು ಕಾರು ಚಾಲಕ ಅಂದಾನಯ್ಯ (37) ಎಂಬುವವರನ್ನು ಬಂಧಿಸಿದ್ದಾರೆ.
‘ಅವಿನಾಶ್ (4) ಮೃತ ಬಾಲಕ. ಈತ ಕೂಲಿ ಕಾರ್ಮಿಕ ಹನುಮಂತಯ್ಯ ಎಂಬುವವರ ಮಗ. ಇವರಿಬ್ಬರು ಶನಿವಾರ ಸಂಜೆ ಸೋಮಸುಂದರಪಾಳ್ಯದ ಗುರುಮೂರ್ತಿ ದೇವಸ್ಥಾನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.