ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸನ್ನು ಪುನರ್ ಸ್ಥಾಪಿಸಲು ನಾನಾ ಪ್ರಯತ್ನಗಳನ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾರ್ಯೋನ್ಮುಖವಾಗಿದ್ದು, ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕಾಂಗ್ರೆಸ್, ಪಕ್ಷ ಸಂಘಟನೆಗೆ ಮುಂದಾಗಿದೆ.
ಅದರಂತೆ ಮುಂದಿನ ಮಾರ್ಚ್ 31 ರ ತನಕ ರಾಜ್ಯದಲ್ಲಿ ಡಿಜಿಟಲ್ ಅಭಿಯಾನದಡಿ ನೂತನವಾಗಿ 50 ಲಕ್ಷ ಸದಸ್ಯರ ನೋಂದಣಿ ಮಾಡಿಸುವಂತಹ ಟಾರ್ಗೆಟ್ ಅನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗಿದೆ. ಈ ಟಾರ್ಗೆಟ್ ರೀಚ್ ಮಾಡಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಹೊಸ ಹೊಸ ಸ್ಕೀಮ್ ಗಳನ್ನು ಪರಿಚಯಿಸುತ್ತಿದೆ.
ಆ ಸ್ಕೀಮ್ ಪ್ರಕಾರ, ಯಾವ ಕಾಂಗ್ರೆಸ್ ಕಾರ್ಯಕರ್ತ ಹೆಚ್ಚು ಹೆಚ್ಚು ಸದಸ್ಯತ್ವ ಒದಗಿಸುವನೋ ಅದರ ಅಧಾರದ ಮೇಲೆ ಆ ಕಾರ್ಯಕರ್ತನಿಗೆ ಉಡುಗೊರೆ ನೀಡಲಾಗುತ್ತ ದೆಯಂತೆ. ಮೂಲಗಳ ಪ್ರಕಾರ, 5,000 ಹೊಸ ನೋಂದಣಿ ಮಾಡಿ ಸುವ ಕಾಂಗ್ರೆಸ್ ಕಾರ್ಯಕರ್ತನಿಗೆ ಫ್ರಿಡ್ಜ್ ನೀಡಲಾಗುವು ದಂತೆ .
3000 ನೋಂದಣಿ ಮಾಡಿಸಿದವರಿಗೆ ಎಲ್.ಇ.ಡಿ ಟಿವಿ ನೀಡಲಾಗುತ್ತಿದ್ದರೆ , 2000 ನೋಂದಣಿ ಮಾಡಿಸುವವರಿಗೆ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಲಾಗು ತ್ತಿದೆ ಎನ್ನಲಾಗುತ್ತಿದೆ.