News Karnataka Kannada
Saturday, May 04 2024
ಬೆಂಗಳೂರು ನಗರ

ಕಾಂಗ್ರೆಸ್ ಕಾರ್ಯಕರ್ತರಿಗೆ ಭರ್ಜರಿ ಆಫರ್

Tiranga padayatra by Congress on August 14
Photo Credit :

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸನ್ನು ಪುನರ್ ಸ್ಥಾಪಿಸಲು ನಾನಾ ಪ್ರಯತ್ನಗಳನ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾರ್ಯೋನ್ಮುಖವಾಗಿದ್ದು, ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕಾಂಗ್ರೆಸ್, ಪಕ್ಷ ಸಂಘಟನೆಗೆ ಮುಂದಾಗಿದೆ.

ಅದರಂತೆ ಮುಂದಿನ ಮಾರ್ಚ್ 31 ರ ತನಕ ರಾಜ್ಯದಲ್ಲಿ ಡಿಜಿಟಲ್ ಅಭಿಯಾನದಡಿ ನೂತನವಾಗಿ 50 ಲಕ್ಷ ಸದಸ್ಯರ ನೋಂದಣಿ ಮಾಡಿಸುವಂತಹ ಟಾರ್ಗೆಟ್ ಅನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗಿದೆ. ಈ ಟಾರ್ಗೆಟ್ ರೀಚ್ ಮಾಡಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಹೊಸ ಹೊಸ ಸ್ಕೀಮ್ ಗಳನ್ನು ಪರಿಚಯಿಸುತ್ತಿದೆ.

ಆ ಸ್ಕೀಮ್ ಪ್ರಕಾರ, ಯಾವ ಕಾಂಗ್ರೆಸ್ ಕಾರ್ಯಕರ್ತ ಹೆಚ್ಚು ಹೆಚ್ಚು ಸದಸ್ಯತ್ವ ಒದಗಿಸುವನೋ ಅದರ ಅಧಾರದ ಮೇಲೆ ಆ ಕಾರ್ಯಕರ್ತನಿಗೆ ಉಡುಗೊರೆ ನೀಡಲಾಗುತ್ತ ದೆಯಂತೆ. ಮೂಲಗಳ ಪ್ರಕಾರ, 5,000 ಹೊಸ ನೋಂದಣಿ ಮಾಡಿ ಸುವ ಕಾಂಗ್ರೆಸ್ ಕಾರ್ಯಕರ್ತನಿಗೆ ಫ್ರಿಡ್ಜ್ ನೀಡಲಾಗುವು ದಂತೆ .

3000 ನೋಂದಣಿ ಮಾಡಿಸಿದವರಿಗೆ ಎಲ್.ಇ.ಡಿ ಟಿವಿ ನೀಡಲಾಗುತ್ತಿದ್ದರೆ , 2000 ನೋಂದಣಿ ಮಾಡಿಸುವವರಿಗೆ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಲಾಗು ತ್ತಿದೆ ಎನ್ನಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು