News Karnataka Kannada
Sunday, May 05 2024
ಬೆಂಗಳೂರು ನಗರ

ಇನ್ಸ್ ಪೆಕ್ಟರ್ ತಂಗಿ ಪ್ರೀತಿಸಿದ್ದಕ್ಕೆ ಬಲಿಯಾದರೇ ತಾಯಿ-ಮಗ?

Photo Credit :

ಇನ್ಸ್ ಪೆಕ್ಟರ್ ತಂಗಿ ಪ್ರೀತಿಸಿದ್ದಕ್ಕೆ ಬಲಿಯಾದರೇ ತಾಯಿ-ಮಗ?

ಬೆಂಗಳೂರು: ತಾಯಿ ಮತ್ತು ಮಗ ಐದನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವ ಬಗ್ಗೆ ಸಂಶಯ ಕಾಡಿದೆ.

ಯಾದಗಿರಿ ಮೂಲದ 55ರ ಹರೆಯದ ಸುಂದರಮ್ಮ ಮತ್ತು 36 ರ ಹರೆಯದ ಮೌನೇಶ್ ಮೃತಪಟ್ಟವರು. ನಾಲ್ಕು ದಿನಗಳ ಹಿಂದೆ ಕಾಡುಗೋಡಿಯ ಬೆಳ್ತೂರಿನಲ್ಲಿ ಅಪಾರ್ಟ್ ಮೆಂಟ್ ಗೆ ಬಂದಿದ್ದ ಇವರಿಬ್ಬರು ಇಂದು ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ ಇದರ ಹಿಂದೆ ಕೋಲಾರದ ಇನ್ಸ್ ಪೆಕ್ಟರ್ ಚಂದ್ರಪ್ಪ ಅವರ ಕೈವಾಡ ಎಂದು ಹೇಳಲಾಗುತ್ತಿದೆ. ಮೌನೇಶ್ ಅವರು ಚಂದ್ರಪ್ಪರ ತಂಗಿಯನ್ನು ಪ್ರೀತಿಸುತ್ತಿದ್ದರು. ಆ ಯುವತಿ ಕೂಡ ಇದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಳು. ಇವರಿಬ್ಬರು ಎರಡು ಮೂರು ಬಾರಿ ಮನೆಬಿಟ್ಟು ಹೋಗಿದ್ದರು. ತಂಗಿ ಕಾಣೆಯಾದ ಬಗ್ಗೆ ಚಂದ್ರಪ್ಪ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಚಂದ್ರಪ್ಪ ಅವರು ತಂಗಿ ಕಾಣಿಯಾದ ಕೋಪದಲ್ಲಿ ಸುಂದರಮ್ಮ ಮತ್ತು ಮೌನೇಶ್ ನನ್ನು ಕೆಳಗೆ ದೂಡಿ ಹಾಕಿರಬಹುದು ಎಂದು ಸಂಶಯಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು