ಬೆಂಗಳೂರು: ತುಂಬಾ ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಹಾಗೂ ಅನರ್ಹ ಶಾಸಕ ಆರ್. ಶಂಕರ್ ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಅರುಣ್ ಕುಮಾರ್ ನ್ನು ಕಣಕ್ಕಿಳಿಸಿದೆ.
ಅರುಣ್ ಕುಮಾರ್ ಅವರು ಕಾಂಗ್ರೆಸ್ ನ ಕೆ.ಬಿ. ಕೊಲಿವಾಡ ಅವರನ್ನು ಎದುರಿಸಲಿರುವರು. ಶಂಕರ್ ಅವರನ್ನು ಎಂಎಲ್ ಸಿಯಾಗಿ ಆಯ್ಕೆ ಮಾಡಿ ಸಚಿವ ಸ್ಥಾನ ನೀಡುವುದಾಗಿ ಶಂಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಪೂಜಾರ ಅವರು ರಾಣಿಬೆನ್ನೂರಿಗೆ ಪರಿಚಿತ ಅಭ್ಯರ್ಥಿಯಾಗಿರದ ಕಾರಣ ಇದರ ಲಾಭವು ಕಾಂಗ್ರೆಸ್ ಗೆ ಹೋಗುವ ಸಾಧ್ಯತೆಯಿಂದೆ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. a