ಬೆಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಸಂಬಂಧ ಪಟ್ಟಂತೆ ಪೋಲೀಸರು ಈಗಾಗಲೇ ನಾಲ್ಕು ಜನರನ್ನು ಬಂಧಿಸಿದ್ದು, ಇಂದು ಬೆಳಗ್ಗೆ ರುದ್ರೇಶನ ಹತ್ಯೆಯ ಪ್ರಮುಖ ಆರೋಪಿ ಪಾಪ್ಯುಲರ್ ಫ್ರಂಟ್ ನ ಜಿಲ್ಲಾಧ್ಯಕ್ಷ ಅಸೀಂ ಷರೀಫ್ ನನ್ನು ಬಂಧಿಸಿದ್ದಾರೆ.
ಜೆಸಿ ನಗರದ ಮೊಹಮ್ಮದ್ ಸಾದಿಕ್ ಅಲಿಯಾಸ್ ಮಹಮ್ಮದ್ ಮಜರ್, ಆರ್.ಟಿ ನಗರದ ಮೊಹಮ್ಮದ್ ಮುಜೀಬುಲ್ಲಾ ಅಲಿಯಾಸ್ ಮೌಲ, ಕೆಜಿ ಹಳ್ಳಿಯ ಗೋವಿಂದಪುರದ ಇರ್ಫಾನ್ ಮತ್ತು ಆಸ್ಟಿನ್ ಟೌನ್ ನ ವಾಸೀಂ ನನ್ನು ಬಂದಿಸಿದ್ದು, ಇಂದು ಈ ಪ್ರಕರಣದ ಪ್ರಮುಖ ಆರೋಪಿಯಾದ ಅಸೀಂ ಷರೀಫ್ ನನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸುವ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಜನರನ್ನು ಬಂಧಿಸಲಾಗಿದೆ.
ಕಮರ್ಷಿಯಲ್ ಸ್ಟ್ರೀಟ್ ನ ಕಾಮರಾಜ ರಸ್ತೆ ಶಿವಾಜಿ ವೃತ್ತ ಸಮೀಪ ಅಕ್ಟೋಬರ್ 16, ಮಧ್ಯಾಹ್ನ 12.30ರ ಸಮಯ ಆರ್ ಎಸ್ ಎಸ್ ಪಥ ಸಂಚಲನದ ಬಳಿಕ ಕುತ್ತಿಗೆಗೆ ತಲ್ವಾರ್ ನಿಂದ ಹೊಡೆದು ರುದ್ರೇಶ್ ನನ್ನು ಹತ್ಯೆ ಮಾಡಲಾಗಿತ್ತು.