ದೇವನಹಳ್ಳಿ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಿಕನ್ ಶಾಪ್ನಲ್ಲಿ ವೈಕ್ತಿಯೊಬ್ಬ ಬಲಿಯಾದ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಸಂಭವಿಸಿದೆ.
ಗೌರಿಬಿದನೂರು ಮೂಲದ ಶ್ರೀರಾಮ್ (29) ಮೃತ ದುರ್ದೈವಿ. ಅಂಬರೀಶ್ ಎಂಬುವರಿಗೆ ಸೇರಿದ, ದೊಡ್ಡಬಳ್ಳಾಪುರ ನಗರದ ಕೋರ್ಟ್ ರಸ್ತೆಬದಿಯಲ್ಲಿರುವ ಹಜ್ ಚಿಕನ್ ಶಾಪ್ನಲ್ಲಿ ಶ್ರೀರಾಮ್ ಕೆಲಸ ಮಾಡುತ್ತಿದ್ದ.
ಮಂಗಳವಾರ ರಾತ್ರಿ ಧಾರಾಕರ ಮಳೆಯಾಗಿದ್ದು, ಮಳೆ ನೀರು ಅಂಗಡಿಗೆ ನುಗ್ಗಿತ್ತು. ಸಿಡಿಲು ಬಡಿದು ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದ್ಯಾವುದರ ಪರಿವೆ ಇಲ್ಲದ ಶ್ರೀರಾಮ್, ಬುಧವಾರ ಬೆಳಗ್ಗೆ ಅಂಡಿಯ ಒಳಗಿದ್ದ ಮಳೆನೀರನ್ನು ಹೊರಹಾಕಲು ಹೋಗಿದ್ದಾರೆ. ಆ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದ ಮುಗಿಲು ಮುಟ್ಟಿದೆ.