News Karnataka Kannada
Saturday, May 04 2024
ಬೆಂಗಳೂರು

ಬೆಂಗಳೂರು: ಪಂಜಾಬ್ ನಂತೆ ಕರ್ನಾಟಕದಲ್ಲೂ ಟೋಲ್ ಪ್ಲಾಜಾ ಮುಚ್ಚಲು ಎಎಪಿ ಆಗ್ರಹ

Aap releases third list of candidates
Photo Credit : Facebook

ಬೆಂಗಳೂರು: ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಸಂವಹನ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಅವರು ಪಂಜಾಬ್ ನಲ್ಲಿ ತಮ್ಮ ಪಕ್ಷದ ಸರ್ಕಾರ ಕೈಗೊಂಡಿರುವ ಮಾದರಿಯಲ್ಲಿ ರಾಜ್ಯದ ಟೋಲ್ ಪ್ಲಾಜಾಗಳನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಳಪ್ಪ, “ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರತಿ ಟೋಲ್ ಪ್ಲಾಜಾಗೆ ಹೋಗಿ ಪರಿಶೀಲಿಸುತ್ತಿದ್ದಾರೆ – ಪಿಪಿಪಿ ಮಾದರಿಯ ಒಪ್ಪಂದದಲ್ಲಿ ಏನಿತ್ತು, ಎಷ್ಟು ಹಣವನ್ನು ಸಂಗ್ರಹಿಸಬೇಕಾಗಿತ್ತು, ಎಷ್ಟು ಹಣವನ್ನು ಸಂಗ್ರಹಿಸಲಾಗಿದೆ, ಯಾವ ಟೋಲ್ ಅನ್ನು ಮುಚ್ಚಬೇಕಾಗಿತ್ತು. ಮತ್ತು ನಂತರ ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

“ಪಂಜಾಬ್ ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಂಟು ಟೋಲ್ ಪ್ಲಾಜಾಗಳನ್ನು ಮುಚ್ಚಲಾಗಿದೆ. ಆದರೆ ಕರ್ನಾಟಕದಲ್ಲಿ, ಕಮಿಷನ್ ದುರಾಸೆಗಾಗಿ, ಅವಧಿ ಮುಗಿದಿದ್ದರೂ ಟೋಲ್ ಪ್ಲಾಜಾಗಳು ಕಾರ್ಯನಿರ್ವಹಿಸುತ್ತಲೇ ಇವೆ” ಎಂದು ಅವರು ಆರೋಪಿಸಿದರು.

ಅವಧಿ ಮುಗಿದಿರುವ ತುಮಕೂರು ಟೋಲ್ ಪ್ಲಾಜಾ ಸೇರಿದಂತೆ ಹಲವು ಟೋಲ್ ಪ್ಲಾಜಾಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೆಟ್ರೋಲ್ ಬೆಲೆ ಏರಿಕೆಯಿಂದ ಈಗಾಗಲೇ ತೊಂದರೆಗೀಡಾದ ಜನರಿಗೆ ಟೋಲ್ಗಳು ಹೊರೆಯಾಗಿವೆ” ಎಂದು ಕಾಳಪ್ಪ ಹೇಳಿದರು.

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಹತ್ತು ಪಥದಲ್ಲ, ಆರು ಪಥದ ಎಕ್ಸ್ ಪ್ರೆಸ್ ವೇ ಎಂದು ನಾವು ಹೇಳಿದ್ದೆವು. ನಂತರ, ಸರ್ಕಾರವೂ ಇದನ್ನು ಒಪ್ಪಿಕೊಂಡಿತು. ಹೆದ್ದಾರಿಯನ್ನು ಎರಡು ಪಥಗಳಿಂದ ನಾಲ್ಕು ಪಥಗಳಿಗೆ ಪರಿವರ್ತಿಸಿದಾಗ ಟೋಲ್ ವಿಧಿಸಿಲ್ಲ.

ಅದೇ ರೀತಿ ಈಗಲೂ ನಾಲ್ಕು ಪಥಗಳಿಂದ ಆರು ಪಥಗಳನ್ನು ನಿರ್ಮಿಸುವಾಗ ಟೋಲ್ ಶುಲ್ಕ ವಿಧಿಸದೆ ಸಾಮಾನ್ಯ ಜನರಿಗೆ ನೆರವಾಗಬೇಕಿತ್ತು. ರಸ್ತೆಗಳನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ಘೋಷಿಸಿದ್ದರೆ ಅದು ಅರ್ಥಪೂರ್ಣವಾಗುತ್ತಿತ್ತು ಎಂದು ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು