ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದ್ದು, ನಾಯಕರ ನಡೆ, ನುಡಿ ಮೇಲೆ ಗಮನವಿರಿಸಲು ಚುನಾವಣಾ ಆಯೋಗ ಸಿವಿಜಿಲ್ ಆ್ಯಪ್ವೊಂದನ್ನು ಪರಿಚಯಿಸಿದ್ದು, ಇದರ ಮೂಲಕ ಸಾರ್ವಜನಿಕರು ಆಯೋಗಕ್ಕೆ ದೂರು ನೀಡಬಹುದಾಗಿದೆ. ಹೀಗೆ ಆ್ಯಪ್ ಮೂಲಕ ಇಲ್ಲಿಯವರೆಗೆ 6711 ದೂರು ದಾಖಲಾಗಿದೆ.
ಸಿವಿಜಿಲ್ ಮೂಲಕ ಹೆಚ್ಚಿನ ದೂರುಗಳು ಅನುಮತಿಯಿಲ್ಲದೆ ಬ್ಯಾನರ್ ಹಾಕುವ ಬಗ್ಗೆಯೇ ಹೆಚ್ಚಿನ ದೂರಿದ್ದು, ಉಡುಗೊರೆ, ಹಣ, ಮದ್ಯ ಹಂಚಿಕೆ ಬಗ್ಗೆಯೂ ದೂರು ಸಲ್ಲಿಕೆಯಾಗಿದೆ. ಈ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ಗಳು ಮತ್ತು ಪೊಲೀಸ್ ಅಧಿಕಾರಿಗಳು ಇಲ್ಲಿಯವರೆಗೆ 1348 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮೇ.8 ರಂದು ಒಂದೇ ದಿನ ರಾಜ್ಯದಲ್ಲಿ 541 ದೂರು ದಾಖಲಾಗಿದೆ. ಕಳೆದ ವಾರದಲ್ಲಿ ದಾಖಲಾದ ದೂರು 640, ನಿನ್ನೆ 541, ಇಂದು 106, ಬಿಬಿಎಂಪಿ ಉತ್ತರ 365, ಬಿಬಿಎಂಪಿ ಸೆಂಟ್ರಲ್ 146, ಬಿಬಿಎಂಪಿ ದಕ್ಷಿಣ 99, ಬೆಂಗಳೂರು ಗ್ರಾಮಾಂತರ 48, ಬೆಂಗಳೂರು ನಗರದಲ್ಲಿ 690 ದೂರುಗಳು ದಾಖಲಾಗಿದೆ.