News Karnataka Kannada
Sunday, May 12 2024
ಬೆಂಗಳೂರು

ಸೈಟಿಗಾಗಿ ಕರ್ನಾಟಕ ನಿವೃತ್ತ ಸೈನಿಕನ ಹೋರಾಟ

High Court
Photo Credit :

ಬೆಂಗಳೂರು: ದೇಶದ ರಕ್ಷಣೆಗಾಗಿ ಗಡಿಯಲ್ಲಿ ಹೋರಾಟ ನಡೆಸಿದ್ದ ಯೋಧನೊಬ್ಬ ಸೈಟಿಗಾಗಿ ಹೋರಾಟ ನಡೆಸಿದ ಪ್ರಕರಣವಿದು. ಸೈನಿಕ, ಕನ್ನಡಿಗ ಕೆ. ಎ ಸುಬ್ರಮಣಿ ಎಂಬುವವರು ಇತ್ತೀಚಿಗೆ ಸೇನೆಯಿಂದ ನಿವೃತ್ತರಾಗಿದ್ದರು. ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ(ಮುಡಾ) ಅವರಿಗೆ ಸೈಟು ಅಲಾಟ್ ಆಗಿತ್ತು. ಆ ಸಂದರ್ಭದಲ್ಲಿ ಸೈಟು ಕೊಳ್ಳಲು ಅವರ ಬಳಿ 3 ಲಕ್ಷ ಹಣ ಇರಲಿಲ್ಲ.

ಹೀಗಾಗಿ ಹಣ ಪಾವತಿಸಲು ಅವರು ಕಾಲಾವಕಾಶ ಕೋರಿದ್ದರು. ನಂತರ ಕಷ್ಟಪಟ್ಟು 3 ಲಕ್ಷ ರೂ. ಹೊಂದಿಸಿ ಸೈಟು ಖರೀದಿಸಲು ಮುಂದಾಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರಿಗೆ ನಿಗದಿಯಾಗಿದ್ದ ಸೈಟನ್ನು ಬೇರೆಯವರಿಗೆ ನೀಡಲಾಗಿತ್ತು. ಹಣ ಪಾವತಿಗೆ ಗಡುವು ಮೀರಿದ ಕಾರಣ ಇನ್ನೊಬ್ಬರಿಗೆ ನೀಡಬೇಕಾಯಿತೆಂದು ಅಧಿಕಾರಿಗಳು ತಿಳಿಸಿದ್ದರು.

ಸೈಟು ಕೈತಪ್ಪಿದ್ದಕ್ಕೆ ಅವರು ಕರ್ನಾಟಕ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ವಿಚಾರಣೆ ನಂತರ ಇದೀಗ ನ್ಯಾಯಾಲಯ ಸುಬ್ರಮಣಿ ಅವರ ಪರವಾಗಿ ತೀರ್ಪು ನೀಡಿದೆ. ನ್ಯಾಯಾಲಯ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುಬ್ರಮಣಿ, ಗಡಿಯಲ್ಲಿ ಶತ್ರುಗಳ ವಿರುದ್ಧದ ಹೋರಾಟಕ್ಕಿಂತ ಸೈಟು ಪಡೆಯಲು ನಡೆಸಿ ಹೋರಾಟವೇ ಕಷ್ಟಕರ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು