ಬೆಂಗಳೂರು : ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿನ ವಾಹನಗಳಿಗೆ ಹಂತ ಹಂತವಾಗಿ ಸಾಂದ್ರೀಕೃತ ನೈಸರ್ಗಿಕ ಅನಿಲ(ಸಿಎನ್ ಜಿ) ಬಳಕೆ ಮಾಡಲು ಉತ್ತೇಜಿಸಲು ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ ಹೊಸ ಯೋಜನೆ ಪ್ರಾರಂಭಿಸಿದೆ.
ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, ಪರಿಸರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಸರ್ಕಾರ ವಾಹನಗಳಿಗೆ ಹಂತ ಹಂತವಾಗಿ ನೈಸರ್ಗಿಕ ಅನಿಲ ಅಳವಡಿಸಲು ಪ್ರಯತ್ನಿಸುತ್ತದೆ. ಬಸ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳಿಗೆ ನೈಸರ್ಗಿಕ ಅನಿಲ ಅಳವಡಿಸಲಾಗುವುದು ಎಂದರು.
ಈ ಯೋಜನೆಯ ಅಡಿಯಲ್ಲಿ, ಗೇಲ್ ಗ್ಯಾಸ್ ಕಂಪನಿ ಬೆಂಗಳೂರಿನಲ್ಲಿ 49 ಸಿಎನ್ಜಿ ಕೇಂದ್ರಗಳನ್ನು ಹೊಂದಿದ್ದು, ಸದ್ಯ 37 ಕೇಂದ್ರಗಳು ಕಾರ್ಯಾ ನಿರ್ವಹಿಸುತ್ತಿದೆ. ಇನ್ನುಳಿದ 12 ಕೇಂದ್ರಗಳು ಅಕ್ಟೋಬರ್ ಅಂತ್ಯದೊಳಗೆ ಬಳಕೆಗೆ ಲಭ್ಯವಾಗಲಿವೆ. ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 50 ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಗೇಲ್ ಗ್ಯಾಸ್ನ ಸಿಇಒ ರಮಣ್ ಛಡ್ಡಾ ತಿಳಿಸಿದರು.