ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಅವರು ಹೇಳಿದ್ದು ಯಾವಾಗಲೂ ಉಲ್ಟಾ ಆಗುತ್ತೆ’ ಎಂದು ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ.
ಮೋದಿ ಈ ದೇಶದ ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಒಮ್ಮೆ ಹೇಳಿದ್ದರು ಆದರೆ ಮೋದಿ 2 ಬಾರಿ ಪ್ರಧಾನಿ ಆಗಿದ್ದಾರೆ. ತಾವು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀನಿ ಅಂದಿದ್ರು ಆದರೆ ಅಧಿಕಾರ ಅವರಿಗೆ ಸಿಗಲಿಲ್ಲ.
ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲ್ಲ ಅಂದರೆ ಬರುತ್ತೆ ಅಂತಾನೆ ಅರ್ಥ. ಕೆಲವರ ಬಾಯಲ್ಲಿ ಮಚ್ಚೆ ಇರುತ್ತೆ. ಅವರು ಹೇಳಿದ ಹಾಗೆ ಆಗುತ್ತೆ ಅಂತಾರೆ. ಆದರೆ ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಹಾಗಾಗಿ ಹೇಳಿದ್ದೆಲ್ಲವೂ ಉಲ್ಟಾ ಆಗುತ್ತೆ’ ಎಂದು ಸಿ. ಟಿ ರವಿ ವ್ಯಂಗ್ಯವಾಡಿದ್ದಾರೆ.