News Karnataka Kannada
Saturday, April 27 2024
ಬೆಂಗಳೂರು

ಸಲೀಂ ಆಡಿದ ಮಾತುಗಳಿಂದ ಮುಜುಗರ ಆಗಿದ್ದು ನಿಜ: ಡಿ.ಕೆ.ಶಿವಕುಮಾರ್

Dkshi Dt 19 6 21 No19621 13 Newsk 0976964141
Photo Credit :

ಸಲೀಂ ಅವರು ಆಡಿದ ಕೆಲ ಮಾತುಗಳಿಂದ ಮುಜುಗರ ಆಗಿದ್ದು ನಿಜ. ಆದರೆ ಅವರ ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ನಾನು ಯಾವ ಪರ್ಸಂಟೇಜ್ ವಿಚಾರದಲ್ಲಿ ಭಾಗಿಯಾಗಿಲ್ಲ.ಸಲೀಂ ಮಾತನಾಡಿರುವ ವಿಚಾರ ಕಾಂಗ್ರೆಸ್ ಪಕ್ಷಕ್ಕೂ, ನನಗೂ ಸಂಬಂಧಿಸುವುದಿಲ್ಲ ಎಂದರು.

ಸಲೀಂ ಹೇಳಿಕೆಯಿಂದ ಮುಜುಗರ ಆಗಿಲ್ಲ ಎಂದು ಹೇಳುವುದಿಲ್ಲ, ಮಾತನಾಡಿದ್ದಾರೆ, ರೆಕಾರ್ಡ್ ಕೂಡ ಇದೆ ಎಂದರು. ಉಗ್ರಪ್ಪ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದು ಭಾವಿಸುತ್ತೇನೆ ಎಂದರು.

ಸಲೀಂ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ, ಮುಜುಗರ ಆಗಿದ್ದಕ್ಕೆ ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಹೇಳಿಕೆ ನೀಡಿದ ಸಲೀಂ ವಿರುದ್ಧ ಪಕ್ಷದ ಶಿಸ್ತು ಸಮಿತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ ಎಂದರು.

ಸಿದ್ದರಾಮಯ್ಯ ಅವರ ಜೊತೆ ಜಗಳವೂ ಇಲ್ಲ ಏನೂ ಇಲ್ಲ. ನಾನು ಯಾವುದೇ ಗುಂಪುಗಾರಿಕೆ ನಡೆಸುವವನಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿಲ್ಲ ಎಂದರು.

ನಾನು ಹಳ್ಳಿಯಿಂದ ಬಂದವನು. ನನ್ನ ಬಾಡಿ ಲ್ಯಾಂಗ್ವೇಜ್ ಬದಲಾವಣೆ ಮಾಡಲು ಸಾಧ್ಯವಿಲ್ಲ. ನನ್ನದೇ ಆದ ಶೈಲಿ ಇದೆ, ನನ್ನದೇ ಆದ ವ್ಯಕ್ತಿತ್ವ, ನನ್ನದೇ ಆದ ನಡತೆ, ನನ್ನದೇ ಆದ ಯಶಸ್ಸು ಇದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು