News Karnataka Kannada
Monday, April 29 2024
ಬೆಂಗಳೂರು

ರಸಗೊಬ್ಬರದ ರಿಯಾಯಿತಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ

Untitled 221
Photo Credit :

ಬೆಂಗಳೂರು: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚಿಗೆ ರಸಗೊಬ್ಬರ ದರದ ಮೇಲಿನ ರಿಯಾಯ್ತಿ ಹೆಚ್ಚಿಸೋ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅದರಂತೆ, ಇದೀಗ ರಸಗೊಬ್ಬರದ ಮೇಲಿನ ರಿಯಾಯ್ತಿ ದರ ಹೆಚ್ಚಿಸಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ 2022-23ನೇ ಸಾಲಿನ ಆರಂಭದಲ್ಲಿಯೇ ಕೇಂದ್ರ ಸರ್ಕಾರ ರಸಗೊಬ್ಬರಗಳಿಗೆ ರಿಯಾಯ್ತಿ ದರ ಹೆಚ್ಚಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ 50 ಕೆಜಿ ಚೀಲದ ಡಿಎಪಿ ಗೊಬ್ಬರದ ಒಟ್ಟು ಬೆಲೆ ರೂ.3,850.65 ಇದ್ದು, ರೈತರು ರೂ.1,350ಗೆ ಖರೀದಿ ಮಾಡುತ್ತಿದ್ದು, ಉಳಿದ ರೂ.2500.65 ( ಶೇ.64.95) ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.

ಪ್ರತಿ 50 ಕೆ.ಜಿ ಚೀಲದ ಎಂ.ಓಪಿ ಗೊಪ್ಪರದ ಒಟ್ಟು ಬೆಲೆ ರೂ.2,459 ಇದ್ದು, ರೈತರು ರೂ.1700ಗೆ ಖರೀದಿ ಮಾಡುತ್ತಿದ್ದು, ಉಳಿದ ರೂ.759.3ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.

ಪ್ರತಿ 50 ಕೆ.ಜಿ ಚೀಲದ ಕಾಂಪ್ಲೆಕ್ಸ್ ( 10:26:26 ) ಗೊಬ್ಬರದ ಒಟ್ಟು ಬೆಲೆ ರೂ.3204.45 ಇದ್ದು, ರೈತರು ರೂ.1470ಕ್ಕೆ ಖರೀದಿ ಮಾಡುತ್ತಿದ್ದು, ಉಳಿದ ರೂ.1734.45ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.

ಪ್ರತಿ 45 ಕೆ.ಜಿ ಚೀಲದ ಯೂರಿಯಾ ಗೊಬ್ಬರದ ಒಟ್ಟು ಬೆಲೆ ರೂ.1,666 ಇದ್ದು, ರೈತರು ರೂ.266ಕ್ಕೆ ಖರೀದಿ ಮಾಡುತ್ತಿದ್ದು, ಉಳಿದ ರೂ.1400ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ ಎಂಬುದಾಗಿ ಮಾಹಿತಿಯನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು