ಬೆಂಗಳೂರು: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚಿಗೆ ರಸಗೊಬ್ಬರ ದರದ ಮೇಲಿನ ರಿಯಾಯ್ತಿ ಹೆಚ್ಚಿಸೋ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅದರಂತೆ, ಇದೀಗ ರಸಗೊಬ್ಬರದ ಮೇಲಿನ ರಿಯಾಯ್ತಿ ದರ ಹೆಚ್ಚಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ 2022-23ನೇ ಸಾಲಿನ ಆರಂಭದಲ್ಲಿಯೇ ಕೇಂದ್ರ ಸರ್ಕಾರ ರಸಗೊಬ್ಬರಗಳಿಗೆ ರಿಯಾಯ್ತಿ ದರ ಹೆಚ್ಚಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ 50 ಕೆಜಿ ಚೀಲದ ಡಿಎಪಿ ಗೊಬ್ಬರದ ಒಟ್ಟು ಬೆಲೆ ರೂ.3,850.65 ಇದ್ದು, ರೈತರು ರೂ.1,350ಗೆ ಖರೀದಿ ಮಾಡುತ್ತಿದ್ದು, ಉಳಿದ ರೂ.2500.65 ( ಶೇ.64.95) ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.
ಪ್ರತಿ 50 ಕೆ.ಜಿ ಚೀಲದ ಎಂ.ಓಪಿ ಗೊಪ್ಪರದ ಒಟ್ಟು ಬೆಲೆ ರೂ.2,459 ಇದ್ದು, ರೈತರು ರೂ.1700ಗೆ ಖರೀದಿ ಮಾಡುತ್ತಿದ್ದು, ಉಳಿದ ರೂ.759.3ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.
ಪ್ರತಿ 50 ಕೆ.ಜಿ ಚೀಲದ ಕಾಂಪ್ಲೆಕ್ಸ್ ( 10:26:26 ) ಗೊಬ್ಬರದ ಒಟ್ಟು ಬೆಲೆ ರೂ.3204.45 ಇದ್ದು, ರೈತರು ರೂ.1470ಕ್ಕೆ ಖರೀದಿ ಮಾಡುತ್ತಿದ್ದು, ಉಳಿದ ರೂ.1734.45ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ.
ಪ್ರತಿ 45 ಕೆ.ಜಿ ಚೀಲದ ಯೂರಿಯಾ ಗೊಬ್ಬರದ ಒಟ್ಟು ಬೆಲೆ ರೂ.1,666 ಇದ್ದು, ರೈತರು ರೂ.266ಕ್ಕೆ ಖರೀದಿ ಮಾಡುತ್ತಿದ್ದು, ಉಳಿದ ರೂ.1400ರಷ್ಟು ರಿಯಾಯ್ತಿ ದರವನ್ನು ಕೇಂದ್ರ ಸರ್ಕಾರವು ಭರಿಸುತ್ತಿದೆ ಎಂಬುದಾಗಿ ಮಾಹಿತಿಯನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಹಂಚಿಕೊಂಡಿದ್ದಾರೆ.