News Karnataka Kannada
Sunday, April 28 2024
ಬೆಂಗಳೂರು

ಬಿಪಿಎಲ್ ಕಾರ್ಡ್ ದಾರರಿಗೆ 50ರಷ್ಟು ರಾಗಿ ಹಾಗೂ ಜೋಳ ವಿತರಣೆಗೆ ಚಿಂತನೆ

Untitled 220
Photo Credit :

ಬೆಂಗಳೂರು: ಪಡಿತರ ಅಕ್ಕಿಯನ್ನು ಶೇಕಡ 50 ರಷ್ಟು ಕಡಿತಗೊಳಿಸಲಾಗುವುದು. ಶೇ. 50 ರಷ್ಟು ರಾಗಿ, ಜೋಳ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ.

ಬಿಪಿಎಲ್ ಕಾರ್ಡ್ ದಾರರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಪೂರೈಕೆಯಾಗುತ್ತಿದ್ದು, ಅದರಲ್ಲಿ ಶೇಕಡ 50 ರಷ್ಟು ಕಡಿತಗೊಳಿಸಲಾಗುವುದು.

ಬದಲಿಗೆ ರಾಗಿ ಇಲ್ಲವೇ ಜೋಳ ವಿತರಿಸಲು ಚಿಂತನೆ ನಡೆಸಲಾಗಿದೆ.

ಪಡಿತರ ಯೋಜನೆಯಡಿ ಕುಟುಂಬಗಳಿಗೆ ಆಹಾರ ಭದ್ರತೆ ಖಾತರಿಪಡಿಸಲು, ಪಡಿತರ ವ್ಯವಸ್ಥೆಗೆ ಬಲ ತುಂಬುವ ಮತ್ತು ಪೌಷ್ಟಿಕತೆ ಖಾತರಿಗಾಗಿ ಸಿರಿಧಾನ್ಯ ನೀಡಲು ಸರ್ಕಾರ ಮುಂದಾಗಿದೆ. ಅಲ್ಲದೇ, ಅನ್ನಭಾಗ್ಯದ ಅಕ್ಕಿ ದುರ್ಬಳಕೆ ದಂಧೆಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರ ಬೆಂಬಲ ನೀಡಿ ರಾಗಿ, ಜೋಳ ಖರೀದಿ ಮಾಡುತ್ತಿದೆ. ಇವುಗಳನ್ನು ಪಡಿತರದಲ್ಲಿ ವಿತರಿಸಲು ಸರ್ಕಾರ ಕ್ರಮಕೈಗೊಂಡಿದೆ. ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ ನೀಡುತ್ತಿದ್ದು, ಕುಟುಂಬದಲ್ಲಿ 5 ಮಂದಿ ಸದಸ್ಯರಿದ್ದರೆ 50 ಕೆಜಿ ಅಕ್ಕಿ ಸಿಗುತ್ತದೆ. ಬಹುತೇಕ ಅಕ್ಕಿ ಕಾಳಸಂತೆ ಪಾಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಶೇಕಡ 50 ರಷ್ಟು ಕಡಿತ ಮಾಡಿ ರಾಗಿ ಇಲ್ಲವೇ ಜೋಳ ನೀಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು