News Karnataka Kannada
Sunday, April 28 2024
ಬೆಂಗಳೂರು

ಮೂವರಿಗೆ ರಾಜ್ಯಪಾಲರಿಂದ ಪ್ರೋತ್ಸಾಹ ಧನ ಘೋಷಣೆ

New Project (1)
Photo Credit :

ಬೆಂಗಳೂರು: ಟೋಕಿಯೋ ಒಲಂಪಿಕ್ಸ್-2020ರ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ಕ್ರೀಡಾಪಟುಗಳು ಮತ್ತು ಕ್ರೀಡಾ ತರಬೇತುದಾರರು ಭಾರತ ದೇಶವನ್ನು ಪ್ರತಿನಿಧಿಸಿರುವುದು ಕರ್ನಾಟಕದ ಜನತೆಗೆ ಹೆಮ್ಮೆಯ ಪ್ರತೀಕವಾಗಿದೆ.

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಟೋಕಿಯೋ ಒಲಂಪಿಕ್ಸ್ -2020ರ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದಂತಹ ಕರ್ನಾಟಕ ರಾಜ್ಯದ ಮೂರು ಕ್ರೀಡಾಪಟುಗಳು ಹಾಗೂ ಒಬ್ಬ ಕ್ರೀಡಾ ತರಬೇತುದಾರರಿಗೆ ತಲಾ 1 ಲಕ್ಷ ರೂಗಳ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ.

ಅಥಿತಿ ಅಶೋಕ್(ಗಾಲ್ಫ್), ಫೌದಾ ಮಿರ್ಜಾ (ಕುದುರೆ ಸವಾರಿ), ಶ್ರೀಹರಿ ನಟರಾಜ್ (ಈಜು) ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ತರಬೇತುದಾರರಾದ ಅಂಕಿತಾ ಸುರೇಶ್ (ಮಹಿಳಾ ಹಾಕಿ ) ರವರಿಗೆ ತಲಾ 1,00,000 ರೂಪಾಯಿಗಳನ್ನು ಪ್ರೋತ್ಸಾಹ ಧನ ನೀಡಲಾಗುವುದು.

ಗೌರವಾನ್ವಿತ ರಾಜ್ಯಪಾಲರು ಕ್ರೀಡಾಪಟುಗಳು ಹಾಗೂ ಕ್ರೀಡಾ ತರಬೇತುದಾರರನ್ನು ಶೀಘ್ರದಲ್ಲೇ ರಾಜಭವನದಲ್ಲಿ ಆಯೋಜಿಸುವ ಸಮಾರಂಭದಲ್ಲಿ ಸನ್ಮಾನಿಸಲಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ ಪ್ರಭುಶಂಕರ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು