ಬೆಂಗಳೂರು: ವಿದ್ಯಾರ್ಥಿ ಹಾಗೂ ವಿವಿ ನಡುವಿನ ಗಲಾಟೆ, ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಸಂಶೋಧನಾ ವಿದ್ಯಾರ್ಥಿ ವಿರುದ್ಧ ಬೆಂಗಳೂರು ವಿವಿಯ ವಿತ್ತಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು ವಿವಿ ಹಾಗೂ ಸಂಶೋಧನಾ ವಿದ್ಯಾರ್ಥಿ ನಡುವಿನ ಗಲಾಟೆ, ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಸಂಬಂಧ ಬೆಂಗಳೂರು ವಿವಿಯ ವಿತ್ತಾಧಿಕಾರಿ ಜಯಲಕ್ಷ್ಮೀ ಎಂಬುವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು ವಿವಿಯಿಂದ ಅನುಮೋದನೆಯಿಲ್ಲದೇ 28 ಕೋಟಿ ರೂ ಅಪ್ರೋವಲ್ ಕುರಿತಂತೆ ಸಂಶೋಧನಾ ವಿದ್ಯಾರ್ಥಿ ಗಲಾಟೆ ಮಾಡಿದ್ದಾರೆ. ಇದೇ ವಿಚಾರವಾಗಿ ಇದೀಗ ವಿವಿಯಿಂದ ಸಂಶೋಧನ ವಿದ್ಯಾರ್ಥಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.