ಬೆಂಗಳೂರು : ನಗರದಲ್ಲಿ ಗಲಭೆ ಸೃಷ್ಠಿಸೋ ಕಾರಣದಿಂದಾಗಿ ಪೆಟ್ರೋಲ್ ಬಾಂಬ್ ಗಳನ್ನು ಸಂಗ್ರಹಿಸಿದ್ದಂತ ಮೂವರು ಆರೋಪಿಗಳನ್ನು, ಪೊಲೀಸರು ಬಂಧಿಸಿದ್ದಾರೆ.
ಸಿಎಂ ಬೊಮ್ಮಾಯಿ ಭೇಟಿಯಾದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್: ಆಜಾನ್ VS ಹನುಮಾನ್ ಚಾಲಿಸ್ ಬಗ್ಗೆ ಸೂಕ್ತ ಕ್ರಮಕ್ಕೆ ಖಡಕ್ ಸೂಚನೆ
ಬೆಂಗಳೂರಿನ ಹೆಣ್ಣೂರು ಪೊಲೀಸರು, ಗಲಭೆ ಸೃಷ್ಠಿಸಲು ಪೆಟ್ರೋಲ್ ಬಾಂಬ್ ಸಂಗ್ರಹಿಸಿದ್ದಂತ ಮುನಾವರ್ ಪಾಷಾ, ಸೈಯದ್ ಹುಸೇನ್ ಮತ್ತು ಸಿಕ್ಕಂದರ್ ಎಂಬಂತ ಮೂವರು ಆರೋಪಿಗಳನ್ನ ಎಡೆಮುರಿ ಕಟ್ಟಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1 ನಾಡಾ ಪಿಸ್ತೂಲ್, 1 ಜೀವಂತ ಗುಂಡು, 10 ಬಿಯರ್ ಬಾಟಲ್, ಲಾಂಗ್ ಮತ್ತು ಮಚ್ಚುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಮೂವರು ಆರೋಪಿಗಳು ಸಾರಾಯಿ ಪಾಳ್ಯದ ನಿವಾಸಿಗಳೆಂದು ತಿಳಿದು ಬಂದಿದೆ.