ಬೆಂಗಳೂರು : ನಟ ಪುನೀತ್ ರಾಜ್ ಕುಮಾರ್ ನಿಧನಾನಂತ್ರ, ನೇತ್ರದಾನ ಮಾಡಿದ್ದರು. ಅವರ ಎರಡು ಕಣ್ಣುಗಳನ್ನು ನಾಲ್ವರಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಶಸ್ತ್ರ ಚಿಕಿತ್ಸೆ ಮೂಲಕ ನಾಲ್ವರಿಗೆ ಅಳವಡಿಸಲಾಗಿತ್ತು. ಈ ಮೂಲಕ ನಾಲ್ವರು ಅಂದರ ಭಾಳಿನಲ್ಲಿ ಬೆಳಕಾಗಿದ್ದರು.
ಸಾವಿನಲ್ಲೂ ಸಾರ್ಥಕತೆ ಮೆರೆದಂತ ನಟ ಪುನೀತ್ ರಾಜ್ ಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದರಿಂದ ಸ್ಪೂರ್ಥಿ ಪಡೆದಿರುವಂತ ಸಾವಿರಾರು ಜನರು, ನೇತ್ರದಾನಕ್ಕೆ ನೋಂದಾಯಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ. ಒಂದೇ ದಿನ ಸಾವಿರಾರು ಜನರು ನೋಂದಣಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿದಂತ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿಯವರು, ಪ್ರತಿದಿನ ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಲು ಜನರ ದಂಡೇ ಹರಿದು ಬರುತ್ತಿದೆ. ದಿನೇ ದಿನೇ ಈ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ ಸಾವಿರಾರು ಜನರು ನೇತ್ರದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ನಟ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಭೇಟಿಯಾಗಿ ಅವರ ಸಮಾಧಿಯ ದರ್ಶನ ಪಡೆದು, ಅಲ್ಲಿಂದ ನೇರವಾಗಿ ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ನೊಂದಣಿಗಾಗಿ ಆಗಮಿಸುತ್ತಿದ್ದಾರೆ. ಈ ಮೊದಲು ದಿನಕ್ಕೆ ಮೂರು ನಾಲ್ಕು ಜನರು ನೋಂದಣಿ ಮಾಡಿದ್ದು ಹೆಚ್ಚಾಗಿತ್ತು. ಈದ ದಿನವೊಂದಕ್ಕೆ ಇನ್ನೂ ಜನರಿಗಿಂತ ಹೆಚ್ಚು ನೋಂದಣಿಗಾಗಿ ಬರ್ತಾ ಇದ್ದಾರೆ. ಈಗಾಗಲೇ ಪುನೀತ್ ನೇತ್ರ ಅಳವಡಿಕೆ ನಂತ್ರ, 30ಕ್ಕೂ ಹೆಚ್ಚು ಕಣ್ಣಿನ ತೊಂದರೆಯಿಂದ ಬಳಲುತ್ತಿರುವುವರಿಗೆ ನೇತ್ರದಾನದ ಮೂಲಕ ಚಿಕಿತ್ಸೆ ನೀಡಲಾಗಿದೆ. ಇದಕ್ಕೆ ಅಪ್ಪು ಅವರೇ ಸ್ಪೂರ್ತಿ ಎಂದರು.