ಬೆಂಗಳೂರು: ತಿರುಪತಿಯಲ್ಲಿ ಇಂದು ದಕ್ಷಿಣ ವಲಯ ಪರಿಷತ್ತಿನ 29ನೇ ಸಭೆಯಲ್ಲಿ ಭಾಗವಹಿಸಲಿದ್ದೇನೆ. ಅಂತರ್ ರಾಜ್ಯ ವಿಚಾರಗಳು ಚರ್ಚೆಗೆ ಬರಲಿವೆ. ಸೌಹಾರ್ದತೆಯಿಂದ ಅಭಿವೃದ್ಧಿ ಕಾರ್ಯಗಳನ್ನು ಒಮ್ಮತ ಮೂಡಿಸುವ ಕೆಲಸವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರ್ ರಾಜ್ಯ ನದಿ ವಿಚಾರಗಳು ನ್ಯಾಯಾಲಯದಲ್ಲಿ ಇರುವುದರಿಂದ ಚರ್ಚೆಗೆ ಬರುವುದಿಲ್ಲ. ಪಾಲಾರ್ ಪ್ರದೇಶದಲ್ಲಿ ಸಣ್ಣ ನೀರಾವರಿ, ರೈಲ್ವೇ ವಿಷಯಗಳು ಮತ್ತು ಮೂಲಸೌಲಭ್ಯಗಳ ವಿಚಾರಗಳು ಅಜೆಂಡಾದಲ್ಲಿವೆ ಎಂದು ತಿಳಿಸಿದರು.