News Karnataka Kannada
Tuesday, April 30 2024
ವಿಜಯಪುರ

ಹಣ ಇರದವರು ರಾಜಕಾರಣಕ್ಕೆ ಬರುವುದು ಪ್ರಜಾತಂತ್ರ ಉಳಿಸಲು :ಮೋಹನದಾಸ್ ತಿರುಗೇಟು

ಹಣ ಇದ್ದವರು ರಾಜಕಾರಣಕ್ಕೆ ಬರುವದು ಪುನಃ ಹಣ ಗಳಿಸುವದಕ್ಕೆ ಆದರೆ ಹಣ ಇರದವರು ರಾಜಕಾರಣಕ್ಕೆ ಬರುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸುವದಕ್ಕಾಗಿ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನದಾಸ್ ಅಗರವಾಲ್ ಹೇಳಿದರು.
Photo Credit : NewsKarnataka

ವಿಜಯಪುರ: ಹಣ ಇದ್ದವರು ರಾಜಕಾರಣಕ್ಕೆ ಬರುವದು ಪುನಃ ಹಣ ಗಳಿಸುವದಕ್ಕೆ ಆದರೆ ಹಣ ಇರದವರು ರಾಜಕಾರಣಕ್ಕೆ ಬರುವುದು ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸುವದಕ್ಕಾಗಿ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಷ್ಟ್ರೀಯ  ಪ್ರಧಾನ ಕಾರ್ಯದರ್ಶಿ ರಾಧಾ ಮೋಹನದಾಸ್ ಅಗರವಾಲ್ ಹೇಳಿದರು.

ನಗರದ ಸಂಗನಬಸವನ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ಈಗಾಗಲೇ ಸಂಸದನಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮುಂದಿನ ೫ ವರ್ಷಗಳ ಕಾಲ ಬಾಕಿ ಉಳಿದಿರುವ ಎಲ್ಲಾ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಬೂತ್‌ ಮಟ್ಟದ ಕಾರ್ಯಕರ್ತರು ನಿಮ್ಮ ಬೂತ್ ಗಟ್ಟಿ ಮಾಡಿಕೊಂಡರೆ ಚುನಾವಣೆ ಗೆಲುವು ಸರಳವಾಗಿ ಆಗುತ್ತದೆ. ಕಾರ್ಯಕರ್ತರು ತಮ್ಮ ಬಂಧು ಮಿತ್ರರನ್ನು ಫೋನ್ ಮೂಲಕ ಸಂಪರ್ಕಿಸಿ ಬಿಜೆಪಿಗೆ ಮತ ಹಾಕಲು ಮನವಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕೆಂದರು.
ಚುನಾವಣೆಯಲ್ಲಿ ಹಣ ಖರ್ಚು ಮಾಡದೇ ಪುಕ್ಸಟ್ಟೆ ಗಿರಾಕಿ ಆಗಿರಬಹುದು ಆದರೆ ಮುಂದಿನ 5 ವರ್ಷಗಳಲ್ಲಿ ಜನರ ಕೆಲಸವನ್ನು ಪುಕ್ಸಟ್ಟೆಯಾಗಿ ಮಾಡಿ ಕೊಡುತ್ತೇನೆಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ,ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಎಸ್.ಕೆ.ಬೆಳ್ಳುಬ್ಬಿ, ಸೋಮನಗೌಡ ಪಾಟೀಲ,ಎ.ಎಸ್.ಪಾಟೀಲ ನಡಹಳ್ಳಿ,ಅರುಣ ಶಹಾಪೂರ, ರಾಜಶೇಖರ ಶೀಲವಂತ,ವಿಜುಗೌಡ ಪಾಟೀಲ,ಕಾಸುಗೌಡ ಬಿರಾದಾರ,ಸಂಜೀವ ಐಹೊಳೆ,ಸ್ವಪ್ನಾ ಕಣಮುಚನಾಳ ಸೇರಿದಂತೆ ಹಲವರು ವೇದಿಕೆಯ ಮೇಲೆ ಇದ್ದರು.ಈರಣ್ಣ ರಾವೂರ ಸ್ವಾಗತಿಸಿದರು. ಮುಳುನಗೌಡ ಪಾಟೀಲ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು