News Karnataka Kannada
Saturday, May 04 2024
ವಿಜಯಪುರ

ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಮತವನ್ನು ಕೇಳಲು ಹೊರಟಿದೆ: ಎಚ್.ಎಫ್. ಜಕ್ಕಪ್ಪ

ಲೋಕಸಭಾ ಚುನಾವಣೆಯ ಪ್ರಯುಕ್ತ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಸ್ತುವಾರಿಗಳಾದ ಎಚ್.ಎಫ್. ಜಕ್ಕಪ್ಪನವರ ಹಾಗೂ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾದ ಲಕ್ಷ್ಮಣ ಲಗಮಾಗೋಳ ರವರು ಜಿಲ್ಲಾ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ, ಓಬಿಸಿ, ಮೈನಾರಿಟಿ ವಿಭಾಗಗಳ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳ ಸಭೆಯನ್ನು ಜರುಗಿಸಲಾಯಿತು.
Photo Credit : NewsKarnataka

ವಿಜಯಪುರ: ಲೋಕಸಭಾ ಚುನಾವಣೆಯ ಪ್ರಯುಕ್ತ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಉಸ್ತುವಾರಿಗಳಾದ ಎಚ್.ಎಫ್. ಜಕ್ಕಪ್ಪನವರ ಹಾಗೂ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾದ ಲಕ್ಷ್ಮಣ ಲಗಮಾಗೋಳ ರವರು ಜಿಲ್ಲಾ ಕಾಂಗ್ರೆಸ್ ಎಸ್‌ಸಿ, ಎಸ್‌ಟಿ, ಓಬಿಸಿ, ಮೈನಾರಿಟಿ ವಿಭಾಗಗಳ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳ ಸಭೆಯನ್ನು ಜರುಗಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಚ್.ಎಫ್. ಜಕ್ಕಪ್ಪನವರ ರವರು ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಲೆ ಇದೆ ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಮತವನ್ನು ಕೇಳಲು ಹೊರಟಿದೆ. ಆದರೆ ಮತದಾರರು ಪ್ರಜ್ಞಾವಂತರಾಗಿದ್ದು, ಬಿಜೆಪಿಯ ಸುಳ್ಳು ಭರವಸೆಗಳಿಗೆ ತಕ್ಕ ಉತ್ತರವನ್ನು ನೀಡಲು ಸಜ್ಜಾಗಿದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಈ ಬಾರಿ ಪರಾಭವಗೊಳಿಸುವುದರ ಮೂಲಕ ಸನ್ಮಾನ್ಯ ರಾಜು ಆಲಗೂರ ರವರನ್ನು ಬಹುಮತದಿಂದ ಗೆಲ್ಲಿಸಿ ಸಂಸತ್ ಭವನಕ್ಕೆ ಕಳಿಸುವ ಕೆಲಸವನ್ನು ಮತದಾರರು ಮಾಡುತ್ತಾರೆಂಬ ಭರವಸೆ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ.ಜಾ. ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ರವರು ಮಾತನಾಡಿ ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷದ ಎಲ್ಲ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳು ಅವಿರತವಾಗಿ ಚುನಾವಣೆ ನಡೆಯುವವರೆಗೂ ಸನ್ಮಾನ್ಯ ರಾಜು ಆಲಗೂರ ರವರ ಗೆಲುವಿಗಾಗಿ ಶ್ರಮಿಸುತ್ತೇವೆ. ಸ್ವತಃ ಒಬ್ಬ ಕಾರ್ಯಕರ್ತನು ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ತಿಳಿದುಕೊಂಡು ಚುನಾವಣೆಯಲ್ಲಿ ಕೆಲಸವನ್ನು ಮಾಡುವಂತೆ ಜಿಲ್ಲಾ ಪದಾಧಿಕಾರಿಗಳಿಗೆ ಹಾಗೂ ಎಲ್ಲ ಬ್ಲಾಕ್ ಅಧ್ಯಕ್ಷರುಗಳಿಗೆ ಮನವಿ ಮಾಡಿದರು.

ಸಭೆಯಲ್ಲಿ ಲಕ್ಷ್ಮಣ ಲಗಮಾಗೋಳ, ಚಂದ್ರಶೇಖರ ಕೊಡಬಾಗಿ, ಸುಭಾಷ ಗುಡಿಮನಿ, ಸುರೇಶ ಗೊಣಸಗಿ, ಅಮಿತ ಚವ್ಹಾಣ, ಪ್ರಿಯಾಂಕಾ ತೊರವಿ, ಸಂಜು ಚವ್ಹಾಣ ಮುಂತಾದವರು ಮಾತನಾಡಿದರು.

ಸಾಹೇಬಗೌಡ ಬಿರಾದಾರ, ಸಣ್ಣಪ್ಪ ತಳವಾರ, ವಸಂತ ಹೊನಮೊಡೆ,ಯುವರಾಜ ಬಜಂತ್ರಿ, ಲಕ್ಷ್ಮಣ ಚಲವಾದಿ, ಬಾಬು ಗುಡಮಿ, ಕೃಷ್ಣಾ ಲಮಾಣಿ, ರಾಘವೇಂದ್ರ ವಡ್ಡೋಡಗಿ, ಭಾರತಿ ಕಾಲೆಬಾಗ, ವಿಶಾಲ ಚವ್ಹಾಣ, ದೀಪಕ ಗುನ್ನಾಪೂರ, ರಾಜೇಶ್ವರಿ ಬಿರಾದಾರ, ಪರಶುರಾಮ ಜಮಖಂಡಿ, ರಾಜು ಇವಣಗಿ, ಸ್ವಪ್ನಾ ಇಮನದ, ಪರಶುರಾಮ ಹೊಸಮನಿ, ಹಣಮಂತ, ಮಹಾದೇವ ಬನಸೋಡೆ, ಸಿದ್ದು ತೋಟದ, ಮಹೇಶ ಚಲವಾದಿ, ಸತೀಶ ಅಡವಿ, ಬಂದಗಿ ಗಸ್ತಿ, ರಾಧಿಕಾ ಹಳ್ಳಿ, ಸುಧಾ ಭಂಡಾರಿ, ಆಶಾ ಸಂಜೀವಗೋಳ ಮುಂತಾದವರು ಉಪಸ್ಥಿತರಿದ್ದರು. ಹಾಗೂ ರಮೇಶ ಗುಬ್ಬೇವಾಡ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ, ಇವರು ಕೂಡ ಹಾಜರಿದ್ದರು

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು