ವಿಜಯಪುರ: ನಾವು ಹಿಂದುಗಳೇ, ಹಿಂದುತ್ವ ಹೆಸರಿನಲ್ಲಿ ಮತಕ್ಕಾಗಿ ಬಿ.ಎಸ್. ಯಡಿಯೂರಪ್ಪ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೂರಿದರು.
ನಗರದಲ್ಲಿ ಮಾತನಾಡಿದ ಅವರು, ಹೆಸರಿಗೆ ಮಾತ್ರ ಹಿಂದುತ್ವದ ಹೆಸರು ಹೇಳುತ್ತಾರೆ. ಒಂದು ಕಡೆಗೆ ಮುಸ್ಲಿಂರನ್ನು ದೇಶದಿಂದ ಹೊರಗಡೆಗೆ ಇಡಲು ಹೇಳುತ್ತಾರೆ. ಮತ್ತೊಂದೆಡೆ ಮುಸ್ಲಿಂ ನಮ್ಮೊಂದಿಗೆ ಬರಬೇಕು ಎನ್ನುತ್ತಾರೆ.
ಆದರೆ ಬಿಜೆಪಿಯವರು ಸಮಯ ಸಾಧಕರು. ಅವರು ಯಾವ ಯಾವ ಸಂದರ್ಭದಲ್ಲಿ ಏನೇನ ಹೇಳಬೇಕು ಎನ್ನುವುದು ಗೊತ್ತಿದೆ. ಅಲ್ಲದೆ ಬಿಜೆಪಿಯವರು ಹೇಳಿದ್ದನ್ನು ಮರೆತು ಹೋಗುತ್ತಾರೆ ಎಂದು ಟೀಕಿಸಿದರು.