ವಿಜಯಪುರ : ಪ್ರವಾಹದಿಂದ ಮನೆಹಾನಿಯಾದವರಿಗೆ ಕೂಡಲೇ 95,000 ಸಾವಿರಗಳನ್ನು ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಅವರು ವಿಜಯಪುರ ಜಿಲ್ಲೆಯಲ್ಲಿ ಲೋಕೋಪಯೋಗಿ, ಕಂದಾಯ, ವಸತಿ, ಪ್ರವಾಸೋದ್ಯಮ, ಆರೋಗ್ಯ, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ 11 ಇಲಾಖೆಗಳ ಸುಮಾರು 244 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಹಣವನ್ನು ಬಿಡುಗಡೆಯಾಗಿದೆ. ಅದರ ಜೊತೆಗೆ 5 ಲಕ್ಷ ಮನೆಗಳ ಮಂಜೂರಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಇದರಲ್ಲಿ 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ 1 ಒಂದು ಲಕ್ಷ ನಗರ ಪ್ರದೇಶದಲ್ಲಿ ನಿರ್ಮಾಣ ಮಾಡಲು ಕ್ರಮಕೈಗೊಂಡಿದೆ, ಇದರಲ್ಲಿ ವಿಜಯಪುರಕ್ಕೂ ಕೂಡ ನಗರ ಪ್ರದೇಶ ಮನೆಗಳನ್ನು ನೀಡುವಂತೆ ಕೆಲಸವನ್ನು ಮಾಡುತ್ತೇವೆ ಎಂದರು. ಇದರೊಂದಿಗೆ ಸ್ಲಂಗಳಲ್ಲಿ 84 ಸಾವಿರ ಮನೆಗಳನ್ನು ನೀಡುವ ತೀರ್ಮಾನವನ್ನು ಮಾಡಲಾಗಿದ್ದು, ನಾನು ಬಂದ ಮೇಲೆ ಅನುಮತಿಯನ್ನು ನೀಡಿದ್ದು, ಈಗಾಲೇ ಕೆಲಸಗಳು ಪ್ರಾರಂಭವಾಗಿದೆ ಎಂದರು.
ಜನಪರ ನಿಲುವುಗಳನ್ನು, ಪ್ರಾದೇಶಿಕವಾಗಿ ಅಭಿವೃದದ್ಧಿ ಮಾಡುವ ಹೆಚ್ಚಿನ ಆದ್ಯತೆ ಕೊಟ್ಟು ನಮ್ಮ ಸರ್ಕಾರ ಕೆಲಸವನ್ನು ಮಾಡುತ್ತಿದ್ದೇವೆ. ಮಂಜೂರು ಆಗಿರುವ 5 ಲಕ್ಷಗಳ ಮನೆಗಳು, ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿಯೇ ಪೂರ್ಣಗೊಳಿಸುವಂತೆ ಸಚಿವರಿಗೂ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಘೋಷಿಸಿರುವ ಯೋಜನೆಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳಿಸುವ ಇದು ನಮ್ಮ ಸರ್ಕಾರದ ನೀತಿಯಾಗಿದೆ.
ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಗಲಿರುಳು ಕೆಲಸವನ್ನು ಮಾಡುತ್ತೇನೆ. ಇದಕ್ಕೆ ವಿಶೇಷವಾದ ಪ್ರಯತ್ನಗಳನ್ನು, ವಿಶೇಷವಾದ ಅನುದಾನವನ್ನು ಹಾಗೂ ವಿಶೇಷವಾದ ಅಧಿಕಾರಿಗಳನ್ನು ನೇಮಿಸಿ, ಮೇಲ್ವಿಚಾರಣೆಯನ್ನು ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿದರು.ವಿಜಯಪುರ ಜಿಲ್ಲೆಯ ಜನರ ನಮಗೆ ಬಹಳ ಸಹಕಾರವನ್ನು ನೀಡಿದ್ದಾರೆ. ಅದರಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಅನೇಕ ಅಭಿವೃದ್ಧಿಗೆ ಕೆಲಸಗಳನ್ನು ಮಾಡಿದ್ದಾರೆ. ಬಿಜಾಪುರ ದುಳಾಪುರ ಅಲ್ಲ ಬಿಜಾಪುರ ಬಂಗಾರದಪುರ ಆಗುತ್ತದೆ ಎಂದರು. ಆ ನಿಟ್ಟಿನಲ್ಲಿ ನಾವು-ನೀವು ಕೆಲಸಗಳನ್ನು ಮಾಡೋಣ ಎಂದು ತಿಳಿಸಿದರು. ಬರುವಂತೆ ದಿನಗಳಲ್ಲಿ ವಿಜಯಪುರಕ್ಕೆ ಆಡಳಿತದಲ್ಲಿಯೂ, ರಾಜಕಾರಣದಲ್ಲಿಯೂ ಒಳ್ಳೆಯ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.