ವಿಜಯಪುರ: ಭಾರೀ ಸದ್ದಿನೊಂದಿಗೆ ಮಂಗಳವಾರ ಮಧ್ಯಾಹ್ನ 3.9 ಕ್ಕೆ ಜಿಲ್ಲೆಯ ಮಸೂತಿ ಗ್ರಾಮದ ವ್ಯಾಪ್ತಿಯಲ್ಲಿ ಲಘು ಭೂಕಂಪನವಾಗಿದ್ದು, ಗ್ರಾಮಸ್ಥರು ಭೀತಿಗೊಳ್ಳುವಂತಾಗಿದೆ.
ಏಕಾಏಕಿ ಭೂಮಿಯೊಳಗೆ ಗಢಗಢ ಸದ್ದಿನೊಂದಿಗೆ, ಭೂಮಿ ಕಂಪಿಸಿದಕ್ಕೆ ಗಾಬರಿಗೊಂಡು ಗ್ರಾಮಸ್ಥರು ಮನೆಯಿಂದ ಹೊರಗೆ ಓಡಿ ಬಂದಿರುವ ಜೊತಗೆ, ಇಲ್ಲಿನ ಸಂಗನಬಸವ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಶಿಕ್ಷಕರು ತರಗತಿಯಿಂದ ಓಡಿ ಬಂದಿದ್ದಾರೆ.
ಇಲ್ಲಿನ ತಳೆವಾಡ, ಮಲಘಾಣ, ಮಸೂತಿ, ಮುಳವಾಡ ಸೇರಿದಂತೆ ಇತರೆ ಭಾಗದಲ್ಲಿ ಭೂಮಿಕಂಪಿಸಿದ ಅನುಭವದಿಂದ ಗ್ರಾಮಸ್ಥರು ಬೆಚ್ಚಿಬೀಳುವಂತಾಗಿದೆ. ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಆಗಾಗ ಭೂಕಂಪವಾಗುತ್ತಿದ್ದು, ಜಿಲ್ಲೆಯ ಮಂದಿ ಆತಂಕಗೊಳ್ಳುವಂತಾಗಿದೆ.