ವಿಜಯಪುರ: ಮೊದಲು ಚಿಕ್ಕೋಡಿ ಜಿಲ್ಲೆಯಾಗಲಿ. ತದನಂತರ ಅಥಣಿ, ತೆಲಸಂಗ ಬೇಕಾದರೆ ಮಾಡಿಕೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಬ್ರಿಟಿಷರು ಉಪ ವಿಭಾಗ ಕಚೇರಿ ಮಾಡಿದ್ದರು. ಅದಕ್ಕಾಗಿ ಚಿಕ್ಕೋಡಿ, ಬೈಲಹೊಂಗಲ, ಬೆಳಗಾವಿ ಮೂರು ಜಿಲ್ಲೆಗಳಾಗಲಿ. ಆದರೆ, ಮೊದಲು ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಯಾಗಬೇಕು. ಇನ್ನು ಬ್ರಿಟಿಷರಿದ್ದ ಸಮಯದಲ್ಲೆ ಚಿಕ್ಕೋಡಿ, ಬೈಲಹೊಂಗಲಕ್ಕೆ ಎಸಿ ಕಚೇರಿ ಇವೆ. ಅದು ನಾನು ಮಾಡಿದ್ದಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಲ್ಲಿ ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಗುತ್ತದೆ. ಜಿಲ್ಲೆಗೆ ಸಚಿವ ಸ್ಥಾನ ಆದಷ್ಟು ಬೇಗ ಬರುತ್ತದೆ ಎಂದರು.