News Karnataka Kannada
Tuesday, May 07 2024
ವಿಜಯಪುರ

ಉಪಚುನಾವಣೆ : ಘನತೆ ಕಾಯ್ದ ಸಿಎಂ , ಬಿಎಸ್‌ವೈ

Cm Bs Yadiyurappa Main
Photo Credit :

ವಿಜಯಪುರ : ಸಿಂದಗಿ ಮತ್ತು ಹಾನಗಲ್‌ಗಳಲ್ಲಿ ನಡೆಯುವ ಉಪಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು ತೀರಾ ಕೆಳಮಟ್ಟದಲ್ಲಿ ಪ್ರಚಾರಕ್ಕಿಳಿದ ಬಳಿಕ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ನಡುವೆ ಪರಸ್ಪರ ಟೀಕಾದಾಳಿಗಳು ತೀವ್ರಗೊಂಡಿತು. ಈ ನಡುವೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಹಲವು ಬಿಜೆಪಿ ನಾಯಕರು ಮಾತ್ರ ಪ್ರಚಾರದ ವೇಳೆ ವೈಚಾರಿಕತೆಯಿಂದ ಪ್ರಚಾರ ಕೆಳಕ್ಕಿಳಿಯಲು ಅವಕಾಶ ನೀಡದಿದ್ದುದು, ಈ ಚುನಾವಣಾ ಪ್ರಚಾರದಲ್ಲಿ ಗಮನ ಸೆಳೆದ ಅಂಶವಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಜಾತೀಯ , ಮತೀಯ ಅಂಶಗಳನ್ನು ಮುಂದೊತ್ತಿ ಮತ ಸೆಳೆಯಲು ವಿವಿಧ ತಂತ್ರಗಳನ್ನು ನಡೆಸಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ತಿರುಗೇಟು ನೀಡುತ್ತಿದ್ದ ವೇಳೆಯಲ್ಲೂ ವೈಚಾರಿಕೆತೆ ಮತ್ತು ನೈತಿಕ ಮಟ್ಟ ಕಾಯ್ದುಕೊಳ್ಳಲು ಕಾಳಜಿ ವಹಿಸಿದ್ದು ವಿಶೇಷವಾಗಿತ್ತು.

ಕಂಬಳಿ ವಿಷಯ , ಆರೆಸ್ಸೆಸ್ ನಿಂದೆಯಂತಹ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರ ಸ್ವಾಮಿ ಅವರ ತಂತ್ರಗಳಿಗೆ ಬೊಮ್ಮಾಯಿ ಅವರು ಉತ್ತರ ನೀಡಿದ್ದು, ಈ ಸಂದರ್ಭ ವೈಚಾರಿಕತೆಗಿಂತ ಕೆಳಗಿಳಿಯದೆ ಮೇಲ್ಪಂಕ್ತಿ ತೋರಿದ್ದು ಜನತೆಯ ಗಮನ ಸೆಳೆದಿರುವ ಅಂಶವಾಗಿದೆ.

ಹಾಗೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಾ ಬಿಜೆಪಿ ವೈಚಾರಿಕ ನೆಲೆಯಲ್ಲಿ ಯಾವುದೇ ಟೀಕೆಗಳನ್ನು ಎದುರಿಸಲು ಸಿದ್ಧವಿದೆ. ಆದರೆ ಇದು ಕೀಳುಮಟ್ಟಕ್ಕೆ ಇಳಿಯಲು ಅವಕಾಶ ನೀಡುವುದಿಲ್ಲ ಎಂಬುದನ್ನು ತಮ್ಮ ಉತ್ತರಗಳಿಂದಲೇ ವ್ಯಕ್ತಗೊಳಿಸಿದರು.

ಮುಸ್ಲಿಮರ ಮತ ಗಳಿಸಲು ಆರೆಸ್ಸೆಸ್ಸನ್ನು ಟೀಕಿಸುವುದು ಸುಲಭದ ದಾರಿ ಎಂದು ಕಂಡುಕೊಂಡಿರುವ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು , ಆರೆಸ್ಸೆಸ್ ನಿಂದೆಯಲ್ಲಿ ಪೈಪೋಟಿಗಿಳಿದರು. ಸಿದ್ದರಾಮಯ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೆಕ್ಯುಲರ್ ಹೆಸರಿನಡಿಯಲ್ಲೇ ಜಾತೀಯವಾದವನ್ನೂ ಪ್ರಚಾರದಲ್ಲಿ ತುರುಕಿದರು. ಆದರೆ ಉಭಯ ಕ್ಷೇತ್ರಗಳ ಮತದಾರರು ಈ ಬಾರಿಯ ಪ್ರಚಾರದ ವೈಖರಿಯನ್ನು ಗಮನಿಸಿದ್ದು, ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು